ಆಲಂದಡ್ಕ: ಡೆಂಗ್ಯೂ ಜ್ವರಕ್ಕೆ ಕಡಿರುದ್ಯಾವರ ಗ್ರಾಮದ ಆಲಂದಡ್ಕ ನಿವಾಸಿ ವಿನಾಯಕ ಪ್ರಭು(65ವ)ಎಂಬುವವರು ನಿಧನರಾಗಿದ್ದಾರೆ.
ಡೆಂಗ್ಯೂ ಜ್ವರ ತೀವ್ರತೆಯ ಪರಿಣಾಮವಾಗಿ ಜೂ.16 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರೊಂದಿಗೆ ಸಮಾಜಮುಖಿ ಕೆಲಸಗಳಲ್ಲೂ ಪಾಲ್ಗೊಳ್ಳುತ್ತಿದ್ದರು.
ಮೃತರು ತಾಯಿ, ಪತ್ನಿ, ಒರ್ವ ಪುತ್ರನನ್ನು ಅಗಲಿದ್ದಾರೆ.