ಬಂಟ್ವಾಳ: ತಂದೆಯನ್ನು ಕೊಂದ ಆರೋಪಿಗಳಾದ ಪಾಪಿ ಮಕ್ಕಳನ್ನು ಉಪ್ಪಿನಂಗಡಿ ಎಸ್.ಐ. ಈರಯ್ಯ ನೇತೃತ್ವದ ತಂಡ ಕೆಲವೇ ಗಂಟೆಗಳಲ್ಲಿ ಬಂಧಿಸಿದೆ.
ಉಪ್ಪಿನಂಗಡಿ ಮುಗ್ಗಗುತ್ತು ನಿವಾಸಿಗಳಾದ ಮೋನಪ್ಪ ಪೂಜಾರಿ (34 ವರ್ಷ) ಹಾಗೂ ನವೀನ (28) ಬಂಧಿತ ಆರೋಪಿಗಳು.
ಜನ್ಮ ಕೊಟ್ಟ ತಂದೆಯನ್ನು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಘಟನೆಯ ವಿವರ: ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕರಾಯ ಗ್ರಾಮದ ಮುಗ್ಗಗುತ್ತು ಎಂಬಲ್ಲಿನ ನಿವಾಸಿ ಧರ್ಣಪ್ಪ ಪೂಜಾರಿ (69)ಅವರು ತನ್ನ ಇಬ್ಬರು ಪುತ್ರರಿಂದಲೇ ಹತರಾದ ದುರ್ದೈವಿ ತಂದೆ.
ಜೂ. 14 ರಂದು ಸುಮಾರು ರಾತ್ರಿ 11.45 ರಿಂದ 12.15 ರ ನಡುವೆ ಧರ್ಣಪ್ಪ ಎಂಬವರನ್ನು ಅವರ ಮಕ್ಕಳಾದ ) ಮೋನಪ್ಪ ಪೂಜಾರಿ (ಪ್ರಾಯ 34 ವರ್ಷ) ಹಾಗೂ ನವೀನ (28 ವರ್ಷ
ಎಂಬವರುಗಳು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕತ್ತಿ ಹಾಗೂ ಅಡಿಕೆ ಮರದ ಸಲಾಕೆಯಿಂದ ಹೊಡೆದು ಕೊಲೆಮಾಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸ್ ಠಾಣಾ ಎಸ್. ಐ.ಈರಯ್ಯ ಸ್ಥಳಕ್ಕೆ ಆಗಮಿಸಿ ಮರಣೋತ್ತರ ಪರೀಕ್ಷೆಯ ಬಳಿಕ ಆರೋಪಿಗಳನ್ನು ಬಂಧಿಸಿದ್ದಾರೆ.