Tuesday, October 31, 2023

ಸೂರಿಕುಮೇರು: ಸೈಂಟ್ ಜೋಸೆಫ್ ಚರ್ಚ್ ವ್ಯಾಪ್ತಿಯ 65 ಬಡಕುಟುಂಬಗಳಿಗೆಶಾಸಕ ರಾಜೇಶ್ ನಾಯ್ಕ್ ಅವರ ವೈಯಕ್ತಿಕ ನಿಧಿಯಿಂದ ದಿನಬಳಕೆಯ ಅಗತ್ಯ ಆಹಾರ ಸಾಮಾಗ್ರಿಗಳ ವಿತರಣೆ

Must read

ಬಂಟ್ವಾಳ : ಸೂರಿಕುಮೇರುನಲ್ಲಿರುವ ಸೈಂಟ್ ಜೋಸೆಫ್ ಚರ್ಚ್ ವ್ಯಾಪ್ತಿಯ 65 ಬಡಕುಟುಂಬಗಳಿಗೆ ಶಾಸಕ ರಾಜೇಶ್ ನಾಯ್ಕ್ ಅವರ ವೈಯಕ್ತಿಕ ನಿಧಿಯಿಂದ ದಿನಬಳಕೆಯ ಅಗತ್ಯ ಆಹಾರ ಸಾಮಾಗ್ರಿಗಳನ್ನು ಬುಧವಾರ ವಿತರಿಸಲಾಯಿತು. ಸೂರಿಕುಮೇರು ಬೊರಿಮಾರ್ ಚರ್ಚ್ ನ ಧರ್ಮಗುರು ವಂದನೀಯ ಫಾದರ್ ಗ್ರೆಗರಿ ಪಿರೇರಾ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಣಿ ಗ್ರಾಮಪಂಚಾಯತ್ ಅಧ್ಯಕ್ಷೆ ಮಮತಾ ಶೆಟ್ಟಿ ,ನೇರಳಕಟ್ಟೆ ವ್ಯ.ಸೇ.ಸಹಕಾರಿ ಬ್ಯಾಂಕ್ ಅಧ್ಯಕ್ಷ ಪುಷ್ಪರಾಜ ಚೌಟ, ಪ್ರಮುಖರಾದ ತೋಟ ನಾರಾಯಣ ಶೆಟ್ಟಿ, ನರಸಿಂಹ ಮಾಣಿ, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಎಲಿಯಾಸ್ ಪಿರೇರಾ, ಕಾರ್ಯದರ್ಶಿ ಮೇರಿ ಡಿ’ಸೋಜಾ, ಧರ್ಮಭಗಿನಿ‌ ನ್ಯಾನ್ಸಿ ಕಿಟ್ ಗಳನ್ನು ವಿತರಿಸಿದರು. ಪಾಲನಾ ಸಮಿತಿಯ ಎಲ್ಲ ಸದಸ್ಯರು ಉಪಸ್ಥಿತರಿದ್ದು, ಚರ್ಚ್ ಮೇಲೆ ಪ್ರೀತಿ ಇಟ್ಟು ಕಿಟ್ ಗಳನ್ನು ಕೊಡುಗೆಯಾಗಿ‌ ನೀಡಿದ ಶಾಸಕ ರಾಜೇಶ್ ನಾಯ್ಕ್ ಅವರಿಗೆ ಅಭಿನಂದನೆ ಸಲ್ಲಿಸಿದರು.

More articles

Latest article