Sunday, October 22, 2023

ಬೆಳ್ತಂಗಡಿ: ಸಿಐಟಿಯು ನ 50ನೇ ವರ್ಷಾಚರಣೆಯ ಅಂಗವಾಗಿ ಮಾನವ ಸರಪಳಿ

Must read

ಬೆಳ್ತಂಗಡಿ: ಸೆಂಟರ್ ಆಫ್ ಇಂಡಿಯಾನ್ ಟ್ರೇಡ್ ಯೂನಿಯನ್ (ಸಿಐಟಿಯು)ನ 50ನೇ ವರ್ಷಾಚರಣೆಯ ಪ್ರಯುಕ್ತ ಮನವ ಸರಪಳಿ ಕಾರ್ಯಕ್ರಮ ಶನಿವಾರ ನಡೆಯಿತು.ಕಾರ್ಮಿಕರ ಹಕ್ಕುಗಳ ಮೂಲಭೂತ ಹಕ್ಕುಗಳ ಕಾರ್ಮಿಕರು ಗುಲಾಮರಲ್ಲ ಎಂಬುವುದು ಪ್ರಮುಖ ಘೋಷಣೆಗಳಾಗಿದ್ದವು.

ಈ ಸಂದರ್ಭದಲ್ಲಿ ಸಂಗಾತಿ ಎಕೆಜಿ ಬೀಡಿ ಕಾರ್ಮಿಕರ ಗೃಹ ನಿರ್ಮಾಣ ಸಹಕಾರಿ ಸಂಘ (ನಿ) ಅಧ್ಯಕ್ಷ ಹರಿದಾಸ್ ಎಸ್‌.ಎಂ , ಮಹಿಳಾ ಹೋರಾಟಗಾರ್ತಿ , ನ್ಯಾಯವಾದಿ ಸುಕನ್ಯಾ ಹೆಚ್, ಸಿಐಟಿಯು ಬೆಳ್ತಂಗಡಿ ತಾಲೂಕು ಅಧ್ಯಕ್ಷ, ನ್ಯಾಯವಾದಿ ಶಿವಕುಮಾರ್ ಎಸ್ ಎಂ ,ಉಪಾಧ್ಯಕ್ಷರಾದ ಶೇಖರ್ ಲಾಯಿಲ, ಕಾರ್ಯದರ್ಶಿ ವಸಂತ ನಡ, ಮಾತನಾಡಿದರು.

ಕಾರ್ಯಕ್ರಮದ ನೇತೃತ್ವವನ್ನು ಸಮುದಾಯ ಸಂಘಟನೆಯ ಸುಜೀತ್ ಉಜಿರೆ, ಸಿಐಟಿಯು ಮುಖಂಡರಾದ ಕೃಷ್ಣ ನೆರಿಯ , ಪ್ರಭಾಕರ್ ತೋಟತ್ತಾಡಿ , ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕ ಸಂಘದ ಮುಖಂಡರಾದ ಮಾಧವರಾಯ್ ಗುರುವಾಯನಕೆರೆ , ರಾಧಾಕೃಷ್ಣ ಮಲವಂತಿಗೆ , ಕುಸುಮ ಮಾಚಾರು , ಕಿರಣ್ ಮಾಚಾರು , ಶ್ರಮಶಕ್ತಿ ಸ್ವಸಹಾಯ ಗುಂಪಿನ ಸಂಯೋಜಕ ಸಂಜೀವ ಆರ್ ಉಜಿರೆ ಉಪಸ್ಥಿತರಿದ್ದರು.

More articles

Latest article