ಬಂಟ್ವಾಳ: ತಾಲೂಕಿನ ಬಿ ಮೂಡ ಗ್ರಾಮದ ಚಿಕ್ಕಯ ಮಠ ನಿವಾಸಿ ಪುಷ್ಪರಾಜ ಪೂಜಾರಿಗೆ ಬಂಟ್ವಾಳದ ರಿಥೇಶ್ ಬಾಳಿಗ ಎಂಬ ವ್ಯಕ್ತಿಯ ಎದೆಗೆ ಹೊಡೆದು, ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ನಡೆದಿದೆ.
ಹಲ್ಲೆ ಮಾಡಿದ್ದಲದೆ ಅವಾಚ್ಯ ಶಬ್ದಗಳಿoದ ಬೈದು, ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಕೇಸು ದಾಖಲಿಸಿದೆ.
ಅಂಗವೈಫಲ್ಯ ಹಾಗೂ ತೀವ್ರ ಎದೆ ನೋವಿನಿoದ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದರು.
ಈ ಸಂದರ್ಭದಲ್ಲಿ ಎ.ಪಿ.ಎಂ.ಸಿ. ಉಪಾಧ್ಯಕ್ಷ ಚಂದ್ರಶೇಖರ ಕೊರ್ಯಾ,ಬಂಟ್ವಾಳ ತಾಲೂಕು ಬಿಲ್ಲವ ಸಂಘದ ಜತೆ ಕಾರ್ಯದರ್ಶಿ ಆನಂದ ಸಾಲಿಯಾನ್, ಯುವವಾಹಿನಿ (ರಿ) ಬಂಟ್ವಾಳ ಘಟಕದ ಮಾಜಿ ಅಧ್ಯಕ್ಷ ಹಾಗೂ ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಲೋಕೇಶ್ ಸುವರ್ಣ ಅಲೆತೂರ್, ಪುರುಷೋತ್ತಮ ಪೇಲತ್ತಿಮಾರ್, ಯೋಗೀಶ್ ಪೂಜಾರಿ ಚಿಕ್ಕಯಮಠ ಹಾಗೂ ಸ್ಥಳೀಯ ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿ ಪುಷ್ಪರಾಜ್ ಪೂಜಾರಿಯ ಆರೋಗ್ಯ ವಿಚಾರಿಸಿ, ಅನ್ಯಾಯದ ವಿರುದ್ದ ದನಿಗೂಡಿಸಿದರು.