ವಿಟ್ಲ: ಕೊರೊನಾ ಭೀತಿಯಿಂದ ಜಿಲ್ಲೆ ಲಾಕ್ ಡೌನ್ ಆದರೂ ಕೃಷಿಕರ ಹಟ್ಟಿಯಿಂದ ಅಥವಾ ಮೇಯಲು ಬಿಟ್ಟಿರುವ ದನಗಳ ಕಳವು ಮಾಡಿ ಬಳಿಕ ಅಕ್ರಮ ಸಾಗಾಟ ಮಾಡಿ ವಧೆ ಮಾಡುವ ನೀಚ ಕೃತ್ಯಕ್ಕೆ ಮಾತ್ರ ಬ್ರೇಕ್ ಬಿದ್ದಿಲ್ಲ.
ಅಕ್ರಮವಾಗಿ ಹಿಂಸಾತ್ಮಕ ರೀತಿಯಲ್ಲಿ ಪಿಕಪ್ ವಾಹನದಲ್ಲಿ ಮೂರು ಜಾನುವಾರುಗಳನ್ನು ಸಾಗಿಸುತ್ತಿದ್ದ ಆರೋಪಿ ಸಹಿತ ವಾಹನವನ್ನು ವಿಟ್ಲ ಎಸ್.ಐ.ವಿನೋದ್ ರೆಡ್ಡಿ ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.
ಬಂಧಿತರಿಂದ ಮೂರು ಜಾನುವಾರು ಹಾಗೂ ಪಿಕಪ್ ವಾಹನ ಒಟ್ಟು 3.24 ಸಾವಿರ ರೂ ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕೋಡಪದವು ಕಂಪದಬೈಲು ನಿವಾಸಿ ಅದ್ರಾಮ ಕೆ. ಬಂಧಿತ ಆರೋಪಿ.
ಇನ್ನಿಬ್ಬರು ಆರೋಪಿಗಳಾದ ರಶೀದ್ ಒಕ್ಕೆತ್ತೂರು, ಖಾದ್ರಿ ಒಕ್ಕೆತ್ತೂರು ಪರಾರಿಯಾದ ಆರೋಪಿಗಳು.
ಪರಾರಿಯಾದ ಇಬ್ಬರು ಆರೋಪಿಗಳ ಕಳವು ಮಾಡಿದ ದನಗಳನ್ನು ವಿಟ್ಲದಲ್ಲಿ ಕಟ್ಟಿ ಹಾಕಿ ಬಳಿಕ ಬಂಧಿತ ಆರೋಪಿಯ ಪಿಕಪ್ ವಾಹನದಲ್ಲಿ ಹಿಂಸಾತ್ಮಕವಾಗಿ ಸಾಗಾಟ ಮಾಡಿ ಬಳಿಕ ವದೆ ಮಾಡುವ ಬಗ್ಗೆ ಆತ ತಿಳಿಸಿದ್ದಾನೆ.
ಇವರ ಮೇಲೆ ಕರ್ನಾಟಕ ಗೋ ಹತ್ಯೆ ನಿಷೇಧ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ