ತುಂಬೆ: ಗುಲಾಡಿ ಚಾರಿಟೇಬಲ್ ಟ್ರಸ್ಟ್ ನ ಆಶ್ರಯದಲ್ಲಿ ಡಾ| ರಘುರಾಮ ಶೆಟ್ಟಿ ಗುಲಾಡಿ ಇವರ ಪ್ರಾಯೋಜಕತ್ವದಲ್ಲಿ ತುಂಬೆ ಗ್ರಾಮದ ಮಾಜಿ ಉಪಾಧ್ಯಕ್ಷ ಪ್ರವೀಣ್ ಬಿ. ತುಂಬೆಯವರ ವಿನಂತಿಯ ಮೇರೆಗೆ ಕೋರೋನಾದಿಂದ ಲೋಕ್ಡೌನ್ ಆಗಿ ತತ್ತರಿಸಿದ ತುಂಬೆ ಗ್ರಾಮದ ಉಮ್ಮನಗುಡ್ಡೆಯ ಪರಿಷ್ಠಿತ ಜಾತಿಯ 10 ಕುಟುಂಬಗಳಿಗೆ, ತುಂಬೆ ಗ್ರಾಮದ ದರ್ಖಾಸಿನ 10 ಕುಟುಂಬಗಳಿಗೆ ಮತ್ತು ತುಂಬೆ ಗ್ರಾಮದ ಬೆರ್ವ ಎಂಬಲ್ಲಿ 5 ಕುಟುಂಬಗಳಿಗೆ ಅಕ್ಕಿ ವಿತರಣಾ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ತುಂಬೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಮೊಹಮ್ಮದ್ ವಳವೂರು, ಹಮೀದ್ ವಳವೂರು,ಪ್ರಕಾಶ್ ರೊಟ್ಟಿಗುಡ್ಡೆ, ಮನೋಹರ ಕೊಟ್ಟಾರಿ, ದಿನೇಶ್ ಪರ್ಲಕ್ಕೆ, ನವೀನ್ ಕಲ್ಲಗುಡ್ಡೆ, ಪ್ರವೀಣ್ ರಾಮಲ್ ಕಟ್ಟೆ, ಧೂಮಪ್ಪ ವಳವೂರು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.