ಬಂಟ್ವಾಳ: ಕೊರೊನಾ ಲಾಕ್ ಡೌನ್ ಅವಧಿಯಲ್ಲಿ ಕರಿಯಂಗಳ ಎಂಬಲ್ಲಿ ಪಲ್ಗುಣಿ ನದಿಯಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿರುವ ಬಗ್ಗೆ ಖಚಿತ ಮೇರೆಗೆ ದಾಳಿ ನಡೆಸಿದ ಪ್ರೋಬೆಷನರಿ ಐ.ಪಿ.ಎಸ್. ರಂಜಿತ್ ಅವರು ದಾಳಿ ನಡೆಸಿ ಲಕ್ಷಾಂತರ ರೂ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡು ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿಸಿದ್ದಾರೆ.
ಒರ್ವನನ್ನು ವಶಕ್ಕೆ ಪಡೆದುಕೊಂಡ ಪೋಲೀಸರು ನಾಲ್ಕು ಜನರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಂಟ್ವಾಳ ತಾಲ್ಲೂಕಿನ ಕರಿಯಂಗಳ ಗ್ರಾಮದ ಕರಿಯಂಗಳ ಎಂಬಲ್ಲಿ ಪಲ್ಗುಣಿ ನದಿಯಲ್ಲಿ ಅಕ್ರಮವಾಗಿ ಮರಳು ಗಾರಿಕೆ ನಡೆಸುತ್ತಿದ್ದು , ಬಳಿಕ ಟಿಪ್ಪರ್ ಲಾರಿಯ ಮೂಲಕ ಅಕ್ರಮವಾಗಿ ಮರಳು ಸಾಗಾಟ ಮಾಡಲಾಗುತ್ತಿತ್ತು ಎಂ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪ್ರೋಬೆಷನರಿ ಐ.ಪಿ.ಎಸ್.ರಂಜಿತ್ ಅವರ ನೇತ್ರತ್ವದ ಪೋಲೀಸರು ಒರ್ವ ಆರೋಪಿ ಸಹಿತ ಸುಮಾರು 20 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಸ್ಥಳದಲ್ಲಿದ್ದ 10 ಲೋಡ್ ಮರಳು, ಮರಳು ತುಂಬಿಸಲು ಉಪಯೋಗಿಸುತ್ತಿದ್ಧ 1 ಹಿಟಾಚಿ, 3 ಬೋಟ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಲಾರಿ ಚಾಲಕ ಪಾಂಡುರಂಗ ಬಂಧಿತ ಆರೋಪಿ.
ಉಳಿದಂತೆ ಆಕೇಶ್, ನವೀನ್, ಶಾಕೀರ್ ಮತ್ತು ಕಬೀರ್ ಎಂಬ ನಾಲ್ವರ ಮೇಲೆ ಪ್ರಕರಣ ದಾಖಲಾಗಿದೆ.
ಅವರು ಪರವಾನಿಗೆ ರಹಿತವಾಗಿ ನದಿಯಲ್ಲಿ ಮರಳು ತೆಗೆದು ಮಾರಾಟ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ 379 ಐ.ಪಿ.ಎಸ್.ಮರಳು ಮತ್ತು ಖನಿಜ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಲಾಕ್ ಡೌನ್ ಯಾರಿಗೆ ಈ ರೀತಿಯಲ್ಲಿ ಅಕ್ರಮ ವ್ಯವಹಾರಗಳಿಗೆ ಇದು ಸಕಾಲವಾಗಿದೆ ? ಎಂಬ ಆರೋಪಗಳು ಕೇಳಿಬರುತ್ತಿದೆ.
ಸಾಮಾನ್ಯ ಜನ ಲಾಕ್ ಡೌನ್ ಆದೇಶ ಕಟ್ಟುನಿಟ್ಟಾಗಿ ಪಾಲಿಸಿದರೆ ಸ್ಥಿತಿವಂತರು ನಿಯಮಗಳನ್ನು ಗಾಳಿಗೆ ತೂರಿ ಅಕ್ರಮ ವ್ಯವಹಾರ ಗಳಲ್ಲಿ ತೊಡಗಿಸಿಕೊಂಡಿರುವುದು ಪೋಲೀಸ್ ದಾಳಿಯ ಬಳಿಕ ಬೆಳಿಕಿಗೆ ಬರುತ್ತಿದೆ.