ಬಂಟ್ವಾಳ: ಮೆಲ್ಕಾರ್ ಟ್ರಾಫಿಕ್ ಎಸ್.ಐ.ರಾಮನಾಯ್ಕ್ ಅವರು ಬೆಳಿಗ್ಗೆಯಿಂದಲೇ ಬಿಸಿರೋಡಿನಲ್ಲಿ ಕಾರ್ಯಚರಣೆಗಿಳಿದಿದ್ದಾರೆ.
ಲಾಕ್ ಡೌನ್ ಅವಧಿಯಲ್ಲಿ ಅನಗತ್ಯವಾಗಿ ತಿರುಗಾಟ ನಡೆಸುವ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ದಿನಬಳಕೆಯ ವಸ್ತುಗಳ ನೆಪದಲ್ಲಿ ಕಾರಿನಲ್ಲಿ ಎರಡಕ್ಕಿಂತ ಅಧಿಕ ಜನ ಹಾಗೂ ಬೈಕಿನಲ್ಲಿ ಇಬ್ಬರು ಅನಗತ್ಯವಾಗಿ ತಿರುಗಾಟ ನಡೆಸುವ ವೇಳೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಟ್ವಾಳದಲ್ಲಿ ಕಳೆದ ಆದಿತ್ಯವಾರ ಕೊರೊನಾದಿಂದ ಮಹಿಳೆ ಮೃತಪಟ್ಟ ಹಿನ್ನೆಲೆಯಲ್ಲಿ ಬಿಸಿರೋಡು ಸಂಪೂರ್ಣ ಕಟ್ಟುನಿಟ್ಟಾಗಿ ಆದೇಶ ಪಾಲಿಸುವ ಬಗ್ಗೆ ಮತ್ತು ಪೊಲೀಸರಿಗೆ ಪುಲ್ ಪವರ್ ನೀಡಲಾಗಿದೆ ಎಂದು ಸಂಸದ ಹಾಗೂ ಸಚಿವರು ತಿಳಿಸಿದ್ದರು. ಅ ಬಳಿಕವೂ ಜನರ ಓಡಾಟ ಕಡಿಮೆಯಾಗದ ಹಿನ್ನೆಲೆಯಲ್ಲಿ ಇಂದು ಪೊಲೀಸರು ಕಾರ್ಯಚರಣೆಗೆ ಇಳಿದಿದ್ದಾರೆ.