Wednesday, October 18, 2023

ಬಡವರಿಗೆ ಅಕ್ಕಿ ನೀಡಿ ಹುಟ್ಟು ಹಬ್ಬ ಆಚರಣೆ

Must read

ಬಂಟ್ವಾಳ: ಕಳ್ಳಿಗೆ ಗ್ರಾಮದ ಬೆಂಜನಪದವು ನಿವಾಸಿ ರಮಾನಂದ ಶೆಟ್ಟಿ ಹಾಗೂ ವಿಜಯಲಕ್ಷ್ಮೀ ದಂಪತಿಯ ಪುತ್ರಿ ಅನಿಶಾ ಶೆಟ್ಟಿ ತನ್ನ ಹುಟ್ಟುಹಬ್ಬವನ್ನು ಬಡವರಿಗೆ ಅಕ್ಕಿಯನ್ನು ದಾನವಾಗಿ ನೀಡುವ ಮೂಲಕ ಬಹಳ ಅರ್ಥಪೂರ್ಣವಾಗಿ ಆಚರಿಸಿಕೊಂಡರು.

ಪ್ರಥಮವಾಗಿ ಭಾರತಮಾತೆಗೆ ದೀಪ ಪ್ರಜ್ವಲಿಸಿ, ಪುಷ್ಪಾರ್ಚನೆಗೈದು ಪ್ರಾರ್ಥಿಸಲಾಯಿತು. ಬಳಿಕ 60 ಮಂದಿ ಬಡವರಿಗೆ ತಲಾ 10 ಕಿ.ಗ್ರಾಂ. ಅಕ್ಕಿ 2 ತೆಂಗಿನಕಾಯಿ ನೀಡುವ ಮೂಲಕ ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ. ಧನ್ಯವಾದಗಳು. ನಿಮ್ಮ ಈ ಸಮಾಜಸೇವೆ ಎಲ್ಲರಿಗೂ ಮಾದರಿಯಾಗಲಿ ಎಂದು ಕಳ್ಳಿಗೆ ಗ್ರಾಮಸ್ಥರು ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

 

More articles

Latest article