ಬಂಟ್ವಾಳ: ಕೊರೊನೊ ವೈರಸ್ ಭೀತಿಯಿಂದ ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ನಡೆಯುವ ಜಾತ್ರಾ ಮಹೋತ್ಸವ ಗಳಲ್ಲಿ ಸಾರ್ವಜನಿಕ ಭಕ್ತಾದಿಗಳಿಗೆ ಪ್ರವೇಶ ನಿರ್ಬಂಧಿಸಿದೆ ಎಂದು ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ.
ದೇವಸ್ಥಾನ ದಲ್ಲಿ ಕೇವಲ ದೇವರ ದರ್ಶನ ಹೊರತುಪಡಿಸಿ ಉಳಿದ ಎಲ್ಲಾ ಸೇವೆಯನ್ನು ಮುಂದಿನ ಆದೇಶದವರೆಗೆ ರದ್ದು ಪಡಿಸಿದೆ, ಹಾಗೂ ದೇವಳಕ್ಕೆ ಬರುವ ಸಾರ್ವಜನಿಕ ರು ತಂಗಲು ಅವಕಾಶ ಇರುವುದಿಲ್ಲ ಹಾಗೂ ದೇವಸ್ಥಾನದಲ್ಲಿ ನಡೆಯುವ ಉತ್ಸವದಲ್ಲಿ ಸಿಬ್ಬಂದಿ ಗಳು ಮಾತ್ರ ಭಾಗವಹಿಸುವ ಅವಕಾಶ ಇರುವುದಿಲ್ಲ ಎಂದು ಅದೇಶ ಮಾಡಿದ್ದಾರೆ.