ಬಂಟ್ವಾಳ: ಮಂಗಳೂರು ಐಜಿಪಿಯಾಗಿ ದೇವಜ್ಯೋತಿ ರೇ ಅವರ ನೇಮಕ ಮಾಡಿ ಸರಕಾರ ಅದೇಶ ಹೊರಡಿಸಿದೆ.
ದೇವಜ್ಯೋತಿ ರೇ ಅವರು ಮಂಗಳೂರು ಐಜಿಪಿ ಯಾಗಿ ನಾಳೆ ಸೋಮವಾರ ಅಧಿಕಾರ ಸ್ವೀಕಾರ ಮಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮಂಗಳೂರು ಐಜಿಪಿಯಾಗಿದ್ದ ಅರುಣ್ ಚಕ್ರವರ್ತಿ ಅವರು ರೈಲ್ವೆ ಎ.ಡಿ.ಜಿ.ಪಿಯಾಗಿ ಭಡ್ತಿ ಹೊಂದಿ ಬೆಂಗಳೂರಿಗೆ ವರ್ಗಾವಣೆ ಆದ ಬಳಿಕ ಅವರ ತೆರವಾದ ಸ್ಥಾನ ಕೆಲ ದಿನಗಳಿಂದ ಖಾಲಿಯಾಗಿತ್ತು . ಪ್ರಸ್ತುತ ಸರಕಾರ ದೇವಜ್ಯೋತಿ ರೇ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.