ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ನ ಸಂಘದ ಸದಸ್ಯರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 25000/- ಸಹಾಯಧನ ವಿತರಣೆಯಾಯಿತು.
ಬಂಟ್ವಾಳ ತಾಲೂಕಿನ ಸರಪಾಡಿ ಗ್ರಾಮದ ಮಂಜೇಶ ಸಂಘದ ಸದಸ್ಯೆ ವೇದಾವತಿ ಎಂಬವರ ಪತಿ ದಿನೇಶ್ ಎಂಬುವವರಿಗೆ ತಲೆಯಲ್ಲಿ ರಕ್ತ ಬ್ಲಾಕ್ ಆಗಿ ತೀರಾ ಅನಾರೋಗ್ಯದಿಂದ ಇದ್ದು, ಇವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ನ ಸಹಾಯಧನ 25,000/- ಚೆಕ್ ನ್ನು ಬಂಟ್ವಾಳ ತಾಲೂಕಿನ ಯೋಜಾನಾಧಿಕಾರಿ ಜಯಾನಂದ ಪಿ. ಅವರು ವಿತರಿಸಿದರು. ಈ ಸಂಧರ್ಭದಲ್ಲಿ ಕಛೇರಿಯ ಹಣಕಾಸು ಪ್ರಭಂದಕರು ಉಪಸ್ಥಿತರಿದ್ದರು.