ಬಂಟ್ವಾಳ: ಕೊರೊನಾ ಎಂಬ ಮಾಹಾಮಾರಿಯಿಂದ ನಮ್ಮ ಊರು ರಕ್ಷಣೆಯಾಗಲಿ, ಬಂಟ್ವಾಳ ತಾಲೂಕಿನ ಸಕಲವಿಘ್ನಗಳು ದೂರವಾಗಿ ಸುಖಿಯಾಗಿರಲಿ ಸಕಲ ಜೀವರಾಶಿಗಳಿಗೆ ದೇವರ ಕೃಪೆಯಿರಲಿ ಎಂದು ಬಿಸಿರೋಡಿನ ಪೋಲೀಸ್ ಲೇನ್ ಶ್ರೀ ಅನ್ನಪೂರ್ಣೇಶ್ವರಿ ದೇವಿ ದೇವಸ್ಥಾನದಲ್ಲಿ ಆರ್ಚಕರು ವಿಶೇಷವಾಗಿ ಬಂಟ್ವಾಳ ಕ್ಷೇತ್ರದ ಪರವಾಗಿ ಮೃತ್ಯುಂಜಯ ಶಾಂತಿ ಹೋಮ ಮಾಡಿದ್ದಾರೆ.
ಸರಕಾರದ ಅದೇಶದಂತೆ ಭಕ್ತಾದಿಗಳ ಕೂಡುವಿಕೆ ಇಲ್ಲದೆ ದೇವಸ್ಥಾನದ ಕೇವಲ ಪೌರೋಹಿತ್ಯ ವರ್ಗ ಮಾತ್ರ ಈ ಪೂಜೆ ನಡೆಸಿದ್ದಾರೆ.
ಕೊರೊನಾ ಎಂಬ ಸಂಕಷ್ಟದಿಂದ ದೇವಿ ಪಾರು ಮಾಡಬೇಕು ಎಂಬ ಉದ್ದೇಶದಿಂದ ಈ ಪೂಜೆ ಮಾಡಲಾಗಿದೆ ಎಂದು ದೇವಸ್ಥಾನದ ಮಾಹಿತಿ ತಿಳಿಸಿದೆ.