ಬಂಟ್ವಾಳ: ಜಗತ್ತೀನಾದ್ಯಂತ ಜನ ಸಮುದಾಯವನ್ನು ಬೆಚ್ಚಿ ಬೀಳಿಸಿದ, ಇಷ್ಟರವರೆಗೆ ಔಷಧವಿಲ್ಲದ ಕೊರೊನಾ ವೈರಸ್ ಮಾನವ ಜನಾಂಗಕ್ಕೆ ಒಂದು ಸವಾಲಾಗಿ ಪರಿಣಮಿಸಿರುವುದರಿಂದ ಮನುಷ್ಯನ ಸ್ವಯಂ ಆಧಾರಿತ ಪ್ರಕಾರಗಳಲ್ಲಿಯೇ ಹತೋಟಿಗೆ ತಂದು ಅದನ್ನು ಹಿಮ್ಮೆಟ್ಟಿಸುವ ಬಹುಪಾಲು ಜವಬ್ದಾರಿ ನಮ್ಮ ಮೇಲಿರುವ ಕಾರಣ ಸರ್ಕಾರದ ವಿವಿಧ ಇಲಾಖೆಯ ಅಡಿಯಲ್ಲಿ ಬರುವ ಅಧಿಕಾರಿಗಳೊಂದಿಗೆ ತಮ್ಮ ತಮ್ಮ ಊರಿನ ಸಂಘ ,ಸಂಸ್ಥೆಗಳೊಂದಿಗೆ ಬಿ.ಜಿ.ಪಿ ಯುವ ಕಾರ್ಯಕರ್ತರು ನಿಕಟವಾಗಿ ಸಂಪರ್ಕ ಇಟ್ಟುಕೊಂಡು ಸಮರೋಪಾಧಿಯಲ್ಲಿ ಈ ಭಯಾನಕ ವೈರಸ್ ಹತೋಟಿಗೆ ಶ್ರಮಿಸಲು ಬಂಟ್ವಾಳ ಕ್ಷೇತ್ರ ಬಿ.ಜೆ.ಪಿ. ಯುವ ಮೋರ್ಚಾ ಅಧ್ಯಕ್ಷ ಪ್ರದೀಪ್ ಅಜ್ಜಿಬೆಟ್ಟು ಪತ್ರಿಕಾ ಹೇಳಿಕೆಯ ಮುಖಾಂತರ ವಿನಂತಿಸಿದ್ದಾರೆ.
ಇಂದಿನಿಂದ ಎಲ್ಲಾ ಯುವ ಬಿ.ಜೆ.ಪಿ ಕಾರ್ಯಕರ್ತರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಶಯದಂತೆ ಜನತಾ ಕರ್ಪ್ಯೂ ಗೆ ಸನ್ನದರಾಗಿ ಕೆಲ ದಿನಗಳ ಮಟ್ಟಿಗೆ ಮನೆಯಲ್ಲಿಯೇ ಇದ್ದುಕೊಂಡು, ವಿದೇಶದಿಂದ ಬಂದವರ ಬಗ್ಗೆ ತೀವ್ರ ಸ್ವರೂಪದ ನಿಗಾ ವಹಿಸುವಂತೆಯೂ ಮನವಿ ಮಾಡಿದ್ದಾರೆ.