


ಬಂಟ್ವಾಳ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ 2ನೇ ಸರಸಂಘಚಾಲಕ ಮಾಧವ ಸದಾಶಿವ ರಾವ್ ಗೋಳ್ವಲ್ಕರ್ ಅವರ ಜನ್ಮದಿನದ ಅಂಗವಾಗಿ ಶಿಶುಮಂದಿರ ಹಾಗೂ ಪೂರ್ವ ಗುರುಕುಲದ ಪುಟಾಣಿಗಳ ಪ್ರತಿಭಾ ದಿನೋತ್ಸವ, ಭಾರತ ಮಾತಾ ಪೂಜನ್, ಸಾಮೂಹಿಕ ಸಾಮರಸ್ಯ ಸಹಭೋಜನ ಕಾರ್ಯಕ್ರಮ ಶ್ರೀ ರಾಮ ವಿದ್ಯಾ ಕೇಂದ್ರದಲ್ಲಿ ನಡೆಯಿತು.
ಪ್ರೌಢ ಶಾಲಾ ಮಾತಾಜಿ ಸೌಮ್ಯ ಶ್ರೀ ಗೂರೂಜಿಯವರ ಜೀವನ ಸಂಸ್ಮರಣೆಯನ್ನು ಮಾಡಿದರು.ಶಿಶುಮಂದಿರ ಮತ್ತು ಪೂರ್ವಗುರುಕುಲದ ಮಕ್ಕಳು ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಸಭಾ ಕಾರ್ಯಕ್ರಮದ ನಂತರ ಸಾಮರಸ್ಯ ಸಹಭೋಜನ ನೆರವೇರಿತು. ವಿದ್ಯಾಕೇಂದ್ರದ ಸುತ್ತಮುತ್ತಲಿನ 236 ಮನೆಗಳಿಂದ ಅನ್ನ, 254 ಮನೆಗಳಿಂದ ಪಲ್ಯ, 279 ಮನೆಗಳಿಂದ ಪಾಯಸ, 200 ಮನೆಗಳಿಂದ ಕೊಬ್ಬರಿ ಮಿಠಾಯಿಗಳನ್ನು, 100 ಮನೆಗಳಿಂದ ತೆಂಗಿನಕಾಯಿ, 25 ಮನೆಗಳಿಂದ ತರಕಾರಿ, 51 ಮನೆಗಳಿಂದ ಉಪ್ಪಿನಕಾಯಿ, 150 ಮನೆಗಳಿಂದ ಬಾಳೆ ಎಲೆ, 40 ಮನೆಗಳಿಂದ ಮಜ್ಜಿಗೆ ತಂದು ವಿದ್ಯಾರ್ಥಿಗಳ ಪೋಷಕರು ಸಹಕರಿಸಿದರು.
ಮಾತೆಯರು ತಯಾರಿಸಿ ತಂದಿದ್ದ ಭೋಜನವನ್ನು ಕಾರ್ಯಕ್ರಮ ಮುಗಿದ ಬಳಿಕ ಎಲ್ಲರಿಗೂ ಬಡಿಸಿಸಲಾಯಿತು. ಸೇರಿರುವವರೆಲ್ಲರೂ ಒಟ್ಟಿಗೆ ಕುಳಿತು ಸಹಭೋಜನದಲ್ಲಿ ಪಾಲ್ಗೊಂಡರು. ಕಾರ್ಯಕ್ರಮದಲ್ಲಿ 2000ಕ್ಕಿಂತಲೂ ಹೆಚ್ಚು ಮಂದಿ ಭಾಗವಹಿಸಿದ್ದರು. ಮುಖ್ಯ ಅತಿಥಿಯಾಗಿ ಮಕ್ಕಳ ತಜ್ಞ ಡಾ. ಅಶ್ವಿನ್ ಬಾಳಿಗಾ, ವಿದ್ಯಾ ಕೇಂದ್ರದ ಅಧ್ಯಕ್ಷ ಬಿ. ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ, ಸಹಸಂಚಾಲಕ ರಮೇಶ್ಎನ್, ಡಾ. ಕಮಲಾ ಭಟ್ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮವನ್ನು ವಿದ್ಯಾ ಜಯರಾಮ್ ನಿರೂಪಿಸಿ, ಸೌಮ್ಯ ಜಯರಾಮ್ ಸ್ವಾಗತಿಸಿ, ಶಿಲ್ಪಾ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಂಪ್ರಿಯಾ ಕುಶಾಲಪ್ಪ ಅಮ್ಟೂರು ನಿರ್ವಹಿಸಿದರು.


