ಬಲ್ಮೆಯ
ಶರಧಿಯೊಳಾಡುವ ಅಲೆಯೇ
ನಲ್ಮೆಯ ಬೆಳ್ಮೊಗ
ತೋರಿಸೆಯಾ?
ಕಾಣದ
ಕನಸನು ತುಂಬುತ ಬರುತಿಹೆ
ರೋಷಾವೇಶವ
ಮರೆತಿಹೆಯಾ?
ಎಲ್ಲರ
ಎದೆಯಲು ತೆರೆಗಳ ಕಂಪನ
ಹೇಳದೆ ಕೇಳದೆ
ಬಂದಿಹೆಯಾ?
ತೀರದ
ನೋವಲು ತೀಡುವೆ ಹೊನಲನು
ಮರಳಿನ ದಿಬ್ಬವ
ನೇರುವೆಯಾ?
ಎದೆಯಲಿ
ಎಗರಿದ ತಳಮಳ ತೂರಲು
ಪವನಗು ಕೊಂಚ
ಹೇಳುವೆಯಾ?
ನೀನೇ
ತುಂಬುತ ಬದುಕಿನ ಚೇತನ
ನನ್ನನು ಆ ಕಡೆ
ದಾಟಿಸೆಯಾ?
✍ನೀ.ಶ್ರೀಶೈಲ ಹುಲ್ಲೂರು