Saturday, October 21, 2023

ಸಮಂಗಲ ಪತ್ತಿನ ಸಹಕಾರ ಸಂಘಕ್ಕೆ ಚುನಾವಣೆ: ಸಹಕಾರ ಭಾರತಿಗೆ ಪ್ರಚಂಡ ಗೆಲುವು

Must read

ಬಂಟ್ವಾಳ: ಪಾಣೆಮಂಗಳೂರು ಸುಮಂಗಲ ಪತ್ತಿನ ಸಹಕಾರ ಸಂಘದ ಮುಂದಿನ ಐದುವರ್ಷದ ಆಡಳಿತ ಮಂಡಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿಯ 11 ಅಭ್ಯರ್ಥಿಗಳು ಪ್ರಚಂಡ ಗೆಲುವು ಸಾಧಿಸಿದ್ದಾರೆ.                                         ಈಶ್ವರ ಆರ್.ಕೆ.ಮೆಲ್ಕಾರ್, ಕೃಷ್ಣಪ್ಪ ಗಾಣಿಗ, ರವೀಂದ್ರ ಸಪಲ್ಯ, ನಾಗೇಶ್ ಕಲ್ಲಡ್ಕ, ಪದ್ಮನಾಭ ಸಪಲ್ಯ ಇಡ್ಕಿದು, ಸಂದೀಪ್ ಕುಮಾರ್ ಹೆಚ್., ಶರತ್ ಹೆಚ್., ದಾಮೋದರ ಸಪಲ್ಯ, ಸದಾಶಿವ ಪುತ್ರನ್, ಬಬಿತ ಸಚಿನ್ ಮೆಲ್ಕಾರ್, ಯಶೋಧ ಅವರು ಜಯ ಗಳಿಸಿದ್ದಾರೆ. 13 ಸ್ಥಾನಗಳ ಪೈಕಿ 11 ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆದಿದ್ದು, ಬಂಟ್ವಾಳ ತಾ.ಗಾಣಿಗ ಸಂಘದ ಅಧ್ಯಕ್ಷ ರಘ ಸಪಲ್ಯ ಅವರ ಮಾರ್ಗದರ್ಶನದಲ್ಲಿ 11 ಸ್ಥಾನಗಳುಕೂಡ ಸಹಕಾರ ಭಾರತಿಯ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಎರಡು ಸ್ಥಾನಗಳಿಗೆ ಚುನಾವಣೆ ನಡೆದಿರುವುದಿಲ್ಲ.ಸಹಕಾರ ಸಂಘದ ಉಪನಿಬಂಧಕರ ಕಚೇರಿಯ ಎನ್.ಜಿ.ಗೋಪಾಲ್ ಅವರು ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು.

More articles

Latest article