Sunday, October 22, 2023

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆ ಸಂಪೂರ್ಣ ಭಸ್ಮ: ಮಾಜಿ ಸಚಿವ ಬಿ.ರಮಾನಾಥ ರೈ ಭೇಟಿ

Must read

ಬಂಟ್ವಾಳ: ತಾಲೂಕಿನ ಬೊಂಡಾಲ ಕೊಡಿ ಪ್ರದೇಶದ ಕಮಲ ಶೆಟ್ಟಿಗಾರ್ ಮನೆಯಲ್ಲಿ ಫೆ. 21 ರಂದು ಶುಕ್ರವಾರ ಸಂಜೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆ ಸಂಪೂರ್ಣ ಬೆಂಕಿಗೆ ಅಹುತಿಯಾಗಿದ್ದು, ಈ ಘಟನೆಯ ಬಗ್ಗೆ ಮಾಹಿತಿ ಪಡೆದ ಮಾಜಿ ಸಚಿವ ಬಿ.ರಮಾನಾಥ ರೈ ಸ್ಥಳಕ್ಕೆ ಭೇಟಿ ನೀಡಿದರು.


ವಿದ್ಯುತ್ ಅವಗಡದಿಂದ ಮನೆ ಮತ್ತು ಮನೆಯಲ್ಲಿನ ಎಲ್ಲಾ ಪೀಠೋಪಕರಣಗಳು ದಿನ ನಿತ್ಯದ ಬಟ್ಟೆ, ಅಕ್ಕಿ ಎಲ್ಲವೂ ಸುಟ್ಟು ಬೂದಿ ಆಗಿದೆ. ಮನೆಗೆ ಬೇಟಿ ನೀಡಿದ ರಮಾನಾಥ ರೈ, ಪದ್ಮನಾಭ ರೈ, ಬೊಂಡಾಲ ಚಿತ್ತರಂಜನ್ ಶೆಟ್ಟಿ ಮತ್ತು ಅನೇಕ ನಾಯಕರು ಭೇಟಿ ನೀಡಿ ಸಾಂತ್ವನ ಹೇಳಿದರು ಮತ್ತು ಸ್ಥಳದಿಂದಲೇ ತಹಶೀಲ್ದಾರ್ ಮತ್ತು ಮನೆಗಾರ್, ಮೆಸ್ಕಾಂ ಅಧಿಕಾರಿಗಳ ಜೊತೆಗೆ ಮಾತನಾಡಿ ಅಗತ್ಯ ಕ್ರಮಗಳ ಬಗ್ಗೆ ಮಾಹಿತಿ ಪಡೆದರು.

More articles

Latest article