


ಬಂಟ್ವಾಳ: ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಭ ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಸಾಲೆತ್ತೂರು-ಮಾರ್ನಬೈಲ್-ನಂದಾವರ ರಸ್ತೆ ೧ಕೋಟಿ ರೂ. ಅನುದಾನದಲ್ಲಿ ಅಭಿವೃದ್ಧಿಗೊಂಡಿದ್ದು, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ರಸ್ತೆ ಕಾಮಗಾರಿಯನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ರವೀಂದ್ರ ಕಂಬಳಿ, ನಂದಾವರ ದೇಗುಲದ ಮೋಕ್ತೇಸರ ಎ.ಸಿ ಭಂಡಾರಿ, ಬಿಜೆಪಿ ಪ್ರಮುಖರಾದ ಶ್ರೀಕಾಂತ್ ಶೆಟ್ಟಿ, ಪ್ರವೀಣ್ ಗಟ್ಟಿ, ತನಿಯಪ್ಪ ಮಡಿವಾಳ, ರೂಪೇಶ್ ಆಚಾರ್ಯ, ಪಂಚಾಯತ್ ಸದ್ಯಸರಾದ ನವೀನ್ ಅಂಚನ್, ಸುಮತಿ ಎಸ್. ವನಜಾ. ಗಿರಿಜಾ, ದಯಾನಂದ ಬಿಎಂ, ಅಶೋಕ್ ಗಟ್ಟಿ, ಸೂರಜ್ ಶೆಟ್ಟಿ ಸಜೀಪ, ಗುರುಕಿರಣ್ ಆಳ್ವ, ವಿಶ್ವನಾಥ್ ಕೊಟ್ಟಾರಿ, ಇದಿನಪ್ಪ, ಇಸ್ಮಾಯಿಲ್ ಲೋಕೋಪಯೋಗಿ ಇಲಾಖೆಯ ಅಭಿಯಂತರ ಅರುಣ್ಪ್ರಕಾಶ್ ಉಪಸ್ಥಿತರಿದ್ದರು.


