ಬಂಟ್ವಾಳ: ಬಡಗಕಜೆಕಾರು ಹಳೆ ವಿದ್ಯಾರ್ಥಿ ಸಂಘ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡ ಒಕ್ಕೂಟದ ವತಿಯಿಂದ ಬಡಗಕಜೆಕಾರು ಶಾಲೆಯಲ್ಲಿ ಪ್ರಥಮ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಜರಗಿತು.
ಬೆಳಗ್ಗೆ 10 ಗಂಟೆಗೆ ಪುಂಜಾಲಕಟ್ಟೆ ಆರಕ್ಷಕ ಠಾಣಾ ಅಧಿಕಾರಿ ಸೌಮ್ಯ ಅವರು ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿಕೊಟ್ಟರು. ನಂತರ ಶಾಲಾ ಮಕ್ಕಳಿಂದ ಕವಾಯತು ನಡೆಸಲಾಯಿತು.
ಬೆಳಗಿನ ಸಭಾ ಕಾರ್ಯಕ್ರಮದಲ್ಲಿ ಬಡಗಕಜೆಕಾರು ಗ್ರಾಮ ಪಂಚಾಯತ್ ಅಧ್ಯಕ್ಷ ವಜ್ರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಹರಿಶ್ಚಂದ್ರ ಪೂಜಾರಿ, ಬಂಟ್ವಾಳ ಎಪಿಎಂಸಿ ಸದಸ್ಯರು, ಧರ್ಮರಾಜ ಜೈನ್ ಕಿಜಾನಾ ರು, ತುಂಗಪ್ಪ ಬಂಗೇರ , ಗ್ರಾ.ಪಂ. ಸದಸ್ಯರಾದ ಶೋಭಾ, ಪ್ರವೀಣ್ ಗೌಡ, ಒಕ್ಕೂಟ ಅಧ್ಯಕ್ಷ ಮಾಧವ ಪೂಜಾರಿ, ಗೋಪಾಲ ಪೂಜಾರಿ, ಎಸ್.ಕೆ.ಡಿ.ಆರ್.ಪಿ. ಮೇಲ್ವಿಚಾರಕರಾದ ಭವಾನಿ, ಮಾಲತಿ ಶೋಭಾ, ವೇಣೂರು ಕುಂಭಶ್ರೀಯ ಸಂಚಾಲಕ ಗಿರೀಶ ಎಚ್., ಪ್ರಾಂಶುಪಾಲ ರಕ್ಷಿತ್ ಕುಲಾಲ್ ರು , ಡೀಕಯ್ಯ ಬಂಗೇರ ಕರ್ಲ, ಉಪಸ್ಥಿತರಿದ್ದರು.
ಹಳೆ ವಿದ್ಯಾರ್ಥಿಗಳಿಗೆ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಾಲಾ ಮುಖ್ಯ ಉಪಾಧ್ಯಾಯ ಸೀತಾರಾಮ್ ಸ್ವಾಗತಿಸಿ, ಶಿಕ್ಷಕಿ ಗೀತಾ ಪ್ರಶಸ್ತಿ ವಾಚಿಸಿದರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರವೀಣ್ ಮಾಡ ವಂದಿಸಿದರು. ದೇವದಾಸ್ ಮತ್ತು ತಾರನಾಥ್ ಕಾರ್ಯಕ್ರಮ ನಿರೂಪಿಸಿದರು.