Thursday, October 26, 2023

ಬಾಕಿಲಗುತ್ತು: ಶತ ಚಂಡಿಕಾ ಯಾಗ, ಕಲಶಾಭಿಷೇಕ

Must read

ವಿಟ್ಲ: ಅನಂತಾಡಿ ಬಾಕಿಲಗುತ್ತು ಕ್ಷೇತ್ರದಲ್ಲಿ ಶುಕ್ರವಾರ ಮುಂಜಾನೆ 5.30 ರಿಂದ ಗಣಪತಿ ಹವನ, ಬೆಳಗ್ಗೆ 7 ಗಂಟೆಯಿಂದ ಶತ ಚಂಡಿಕಾ ಯಾಗ ಆರಂಭಗೊಂಡಿತು. 10.45ಕ್ಕೆ ಯಾಗ ಪೂರ್ಣಾಹುತಿ ನಡೆಯಿತು.
ಶ್ರೀ ಕ್ಷೇತ್ರದ ಶ್ರೀ ಉಳ್ಳಾಲ್ತಿ, ಹೊಸಮ್ಮನ ಸನ್ನಿಧಿಯಲ್ಲಿ ಕಲಶಾಭಿಷೇಕ ನಡೆದವು. ಮಧ್ಯಾಹ್ನ ಮಹಾಪೂಜೆ, ಮಂತ್ರಾಕ್ಷತೆ, ಪ್ರಸಾದ ವಿತರಣೆ ನಡೆಯಿತು.
ಬೆರ್ಮೆರ್ ಬೈದೇರುಗಳ ಗರಡಿಯಲ್ಲಿ ಮಧ್ಯಾಹ್ನ ಬೈದೇರುಗಳ ದರ್ಶನ, ಧರ್ಮಚಾವಡಿ ಭೇಟಿ, ಬಳಿಕ ಅನ್ನ ಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಬಾಕಿಲಗುತ್ತು ಆಡಳಿತ ಟ್ರಸ್ಟ್, ಬಾಕಿಲಗುತ್ತು ಜೀರ್ಣೋದ್ಧಾರ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು, ಬಾಕಿಲಗುತ್ತು ಕುಟುಂಬಸ್ಥರು, ಊರಪರವೂರ ದೈವಾಭಿಮಾನಿಗಳು ಇದ್ದರು.

More articles

Latest article