ವಿಟ್ಲ: ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಕಾಲಾವಧಿ ವಾರ್ಷಿಕ ಜಾತ್ರೆಯ ಎರಡನೇ ದಿವಸದಲ್ಲಿ ದೇವರ ನಿತ್ಯೋತ್ಸವ ಬಲಿ ನಡೆಯಿತು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಟ್ಲ ಲಲಿತ ಕಲಾ ಸದನದ ನೃತ್ಯ ನಿರ್ದೇಶಕಿ ವಿದುಷಿ ನಯನಾ ಸತ್ಯನಾರಾಯಣ ಅವರ ಶಿಷ್ಯೆಯರಿಂದ ಭರತನಾಟ್ಯ ನೃತ್ಯ ವೈವಿಧ್ಯ ಕಾರ್ಯಕ್ರಮ ಹಾಗೂ ಉರಿಮಜಲು ಮಕ್ಕಳ ತಂಡದಿಂದ ‘ಸ್ವರ ತರಂಗ’ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು.