Thursday, October 26, 2023

ಚಂದಳಿಕೆ ಕಾರ್ತಿಕ್ ಪ್ರೆಂಡ್ಸ್ ಕ್ಲಬ್ ನ ಅಧ್ಯಕ್ಷರಾಗಿ ಕೃಷ್ಣ ಮುದೂರು ಆಯ್ಕೆ

Must read

ವಿಟ್ಲ: ಚಂದಳಿಕೆ ಕಾರ್ತಿಕ್ ಪ್ರೆಂಡ್ಸ್ ಕ್ಲಬ್ ಇದರ ನೂತನ ಅಧ್ಯಕ್ಷರಾಗಿ ಕೃಷ್ಣ ಮುದೂರು ಅವರನ್ನು ಆಯ್ಕೆ ಮಾಡಲಾಯಿತು. ಇವರು ಹಲವಾರು ಧಾರ್ಮಿಕ ಹಾಗೂ ಸಂಘ ಸಂಸ್ಥೆಗಳಲ್ಲಿ ವಿವಿಧ ಜವಾಬ್ದಾರಿಯನ್ನು ನಿರ್ವಹಿಸಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ ಕ್ಲಬ್ ನ ಮಹಾಸಭೆಯಲ್ಲಿ ಮುಂದಿನ ಅವಧಿಗೆ ಅಧ್ಯಕ್ಷರಾಗಿ ನೇಮಕ ಮಾಡಲಾಗಿದ್ದು, ಪ್ರಧಾನ ಕಾರ್ಯದರ್ಶಿಯಾಗಿ ಜಗದೀಶ್ ಗೌಡ ಎಂ., ಕೋಶಾಧಿಕಾರಿಯಾಗಿ ನರೇಂದ್ರ ಚಂದಳಿಕೆ, ಗೌರವ ಅಧ್ಯಕ್ಷ ಶೇಖರ್ ಕಾಯರ್ಮಾರ್., ಉಪಾಧ್ಯಕ್ಷ ಗಂಗಾಧರ ಕೆ. ಹಾಗು ಅವಿನಾಶ್ ಸಿ. ಜತೆ ಕಾರ್ಯದರ್ಶಿಯಾಗಿ ದಯಾನಂದ ಎಂ., ಸಂಸ್ಕೃತಿಕ ಕಾರ್ಯದರ್ಶಿಯಾಗಿ ಲೋಕೇಶ್ ವಿ., ಕ್ರೀಡಾ ಕಾರ್ಯದರ್ಶಿಯಾಗಿ ಲೋಹಿತ್ ಎಂ. ಹಾಗೂ ದೀಕ್ಷಿತ್ ಎಂ., ಲೆಕ್ಕಪರಿಶೋಧಕರಾಗಿ ಗಂಗಾಧರ ಸಿ., ಸಂಘಟನಾ ಕಾರ್ಯದರ್ಶಿಯಾಗಿ ಜಯರಾಮ್ ಯನ್., ಗೌರವ ಸಲಹಾಕಾರರಾಗಿ ಗಣೇಶ ಸಿ., ವಿಶ್ವನಾಥ್ ಎ., ಬಾಬು ವಿ ಕೆ. ಹಾಗೂ ಸಭೆಯಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಆಯ್ಕೆ ಮಾಡಲಾಯಿತು.

More articles

Latest article