Friday, October 27, 2023

ಜ.29, 30: ಪಿಲಿಂಜ ಶ್ರೀ ಕಲ್ಲುರ್ಟಿ ಮತ್ತು ಗುಳಿಗ ಸಾನಿಧ್ಯದಲ್ಲಿ ಪುನರ್‍ ಪ್ರತಿಷ್ಠಾಪನಾ ಕಾರ್ಯಕ್ರಮ

Must read

ನೆಟ್ಲ: ಪಿಲಿಂಜ ಶ್ರೀ ಕಲ್ಲುರ್ಟಿ ಮತ್ತು ಗುಳಿಗ ಸಾನಿಧ್ಯದಲ್ಲಿ ಜ.29 ಹಾಗೂ ಜ.30 ರಂದು ಪುನರ್‍ ಪ್ರತಿಷ್ಠಾಪನಾ ಕಾರ್ಯಕ್ರಮ ಜರಗಲಿದೆ. ಜ.29 ರಂದು ಸಂಜೆ ಪುಣ್ಯಾಹ, ಪ್ರಾಸಾದ ಶುದ್ಧಿ, ವಾಸ್ತು ಹೋಮ, ರಾಕ್ಷೋಘ್ನ ಹೋಮ, ಮಂಚಶುದ್ಧಿ, ಅಧಿವಾಸ, ಪ್ರಾಕಾರ ಬಲಿ, ಸೂತ್ರ ಕಟ್ಟುವುದು ನಡೆಯಲಿದೆ.

ಜ.30 ರಂದು ಬೆಳಗ್ಗೆ ಪುಣ್ಯಾಹ್ನ, ಗಣಹೋಮ, ನವ ಕಲಶ, ಪ್ರಧಾನ ಹೋಮ, ಪ್ರತಿಷ್ಠೆ ಕಲಶ, ಪ್ರತಿಷ್ಠೆ ದುರ್ಗಾ ಪೂಜೆ, ಪರ್ವ ಮಹಾ ಮಂಗಳಾರತಿ, ಪ್ರಸಾದ ವಿತರಣೆ ನಂತರ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 7ಕ್ಕೆ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8 ಗಂಟೆಯಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ಅವರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಹಲವಾರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ರಾತ್ರಿ ಅನ್ನ ಸಂತರ್ಪಣೆ ನಂತರ ಮಂಜೆಶ್ವರದ ಶಾರದಾ ಆಟ್ಸ್ ತಂಡದ ಐಸಿರಿ ಕಲಾವಿದೆರ್ ಇವರಿಂದ ತುಳು ಹಾಸ್ಯಮಯ ನಾಟಕ ಗಿರಿಗಿಟ್ ಗಿರಿಧರೆ ನಡೆಯಲಿದೆ ಎಮದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

More articles

Latest article