Saturday, April 6, 2024

ಮಾಡರ್ನ್ ಕವನ- ಮುಂದೂಡಲಾಗಿದೆ

ಕೋರ್ಟಿನಲ್ಲಿದೆ
ಒಂದು ಕೇಸ್ ಇತ್ಯರ್ಥಕ್ಕಾಗಿ.
ಕೊಟ್ಟವನು ಪಕ್ಕದ ಮನೆಯವನು
ಕಾರಣ ಪಪ್ಪಾಯಿ ಮರ..!!

ನನ್ನ ಮತ್ತು ಅವನ
ಮನೆಯ ಬೇಲಿಯ ಮಧ್ಯೆ
ಬೆಳೆದಿದೆ ಒಂದು ಪಪ್ಪಾಯಿ ಮರ..
ಇದು ನನ್ನದು ಎಂದವನು.,
ನನ್ನದೆಂದು ನಾನು.
ನಿಲ್ಲದ ಜಗಳ
ಕೋರ್ಟ್ ಮೆಟ್ಟಲೇರಿಸಿದ್ದು..!

ನ್ಯಾಯಾಧೀಶರೇ ಅದು ನನಗೆ ಸೇರಿದ್ದು..
ದಿನ ನೀರು ಹಾಕಿದ್ದೇನೆ.
ಇಲ್ಲ ಅದು ನನ್ನದು
ಗೊಬ್ಬರ ಸುರಿದಿದ್ದೇನೆ..
ನಾನು ತಿಂದು ಹಾಕಿದ ಬೀಜ
ಮೊಳಕೆಯೊಡೆದು
ಬಂದ ಗಿಡವದು..
ಇಲ್ಲ ಅದು ಕಾಗೆ ತಿಂದು ಹಾಕಿದ ಬೀಜ..

ಈ ಕೇಸನ್ನು ನಾಳೆಗೆ
ಮುಂದೂಡಲಾಗಿದೆ..
ಅಲ್ಲಿವರೆಗೂ ಯಾರು ಆ ಪಪ್ಪಾಯಿಯನ್ನು
ಮುಟ್ಟುವಂತಿಲ್ಲ

ಮರುದಿನ
ಲಾಯರ್ ವಾದಿಸಿದ
ನೀರು ಹಾಕಿದ್ದು ನನ್ನ ಕಕ್ಷಿದಾರ
ಇಲ್ಲ ಗೊಬ್ಬರ ಹಾಕಿದ್ದು ನನ್ನ ಕಕ್ಷಿದಾರ..
ಗೊಬ್ಬರ ಹಾಕಿದರೆ ಸಾಲದು ನೀರೆ ಮುಖ್ಯ
ಕಾಯಿ ಬಿಡಲು ನೀರು ಸಾಕಾಗಲ್ಲ
ಗೊಬ್ಬರವು ಬೇಕು..

ಮತ್ತೆ
ನ್ಯಾಯಾಧೀಶರ ಅದೇ ಮಾತು
ನಾಳೆಗೆ ಮುಂದೂಡಲಾಗಿದೆ..
ಅಲ್ಲಿಯವರೆಗೆ….

ನಿನ್ನೆಯೊಂದು ಪಪ್ಪಾಯಿ
ಹಣ್ಣಾಗಿ
ಉದುರಿ ಹೋಗಿದೆ,
ಇವತ್ತೊಂದು ಉದುರುವ ಹಂತದಲ್ಲಿದೆ.,
ನಾಳೆಗೊಂದು ಹಣ್ಣಾಗುವಂತಿದೆ..!
ಕೆಳಗೆ ಬಿದ್ದ ಹಣ್ಣನ್ನು
ಇರುವೆ, ಹುಳ ಹಂಚಿ ತಿನ್ನುತ್ತಿವೆ.
ಉದುರುವ ಹಂತದಲ್ಲಿರುವ ಹಣ್ಣನ್ನು
ಅಳಿಲು, ಬಾವಲಿ, ಕಾಗೆ ಸಮಪಾಲು ಮಾಡಿಕೊಂಡಿವೆ.
ಹಣ್ಣಾಗಲಿರುವ ಕಾಯಿಗೆ
ಗಿಳಿ,ಗುಬ್ಬಿ ಸ್ಕೆಚ್ ಹಾಕಿವೆ..
ಅಂತು ದಿನ ಹಕ್ಕಿಗಳ ಕಲರವ ಅದರ ಸುತ್ತ..!

ನಾವು ನಾಳೆಯ
ತೀರ್ಪಿಗೆ ಕಾಯುತ್ತಿದ್ದೇವೆ..
ಮತ್ತೆ ಮುಂದೂಡಿದರೆ
ಮತ್ತೆ ಕಾಯುತ್ತೇವೆ…!

ಯತೀಶ್ ಕಾಮಾಜೆ

More from the blog

ಕೊಳವೆ ಬಾವಿಗೆ ಬಿದ್ದ 2 ವರ್ಷದ ಕಂದಮ್ಮ : ರಕ್ಷಣೆಗೆ ಅರ್ಧ ಅಡಿಯಷ್ಟೇ ಬಾಕಿ

ವಿಜಯಪುರ: ಕೊಳವೆ ಬಾವಿಗೆ ಬಿದ್ದಿರುವ ಮಗು ಸಾತ್ವಿಕ ಸುರಕ್ಷಿತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತಕ್ಕೆ ಬಂದಿದೆ. ಮಗು ಸುರಕ್ಷಿತವಾಗಿದ್ದು, ಕಾರ್ಯಾಚರಣೆ ಆಶಾದಾಯಕವಾಗಿದೆ. 16 ಅಡಿ ಆಳದಲ್ಲಿರುವ ಸಾತ್ವಿಕ್ ರಕ್ಷಣೆಗಾಗಿ 22 ಅಡಿ ಆಳದವರೆಗೆ ಸುರಂಗ...

ಮಿತಿ ಮೀರಿದ ತಾಪಮಾನ : ಖಡಕ್​ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ

ಬೆಂಗಳೂರು: ರಾಜ್ಯದಲ್ಲಿ ಬಿರು ಬಿಸಿಲು ಹೆಚ್ಚಳವಾಗುತ್ತಿದ್ದು ಮುಂದಿನ 14 ದಿನಗಳ ಕಾಲ ಬಿಸಿಗಾಳಿ ಬೀಸಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ (KSNDMC) ಮುನ್ಸೂಚನೆ ನೀಡಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಏಪ್ರಿಲ್​...

ಮನೆಯ ಮಹಡಿಯಿಂದ ಬಿದ್ದು ಬಾಲಕ ಸಾವು

ಬಂಟ್ವಾಳ: ಮನೆಯ ಮಹಡಿಯ ಮೇಲಿಂದ ಕೆಳಗೆ ಬಿದ್ದು ಬಾಲಕನೋರ್ವ ಮೃತಪಟ್ಟ ಘಟನೆ ಎ.‌ ೧ರ ಮುಂಜಾನೆ ನಡೆದಿದೆ. ಬಂಟ್ವಾಳ ಜಕ್ರಿಬೆಟ್ಟು ನಿವಾಸಿ ದಿನೇಶ್ ಪೂಜಾರಿ ಅವರ ಪುತ್ರ ಆದಿಶ್(೧೫) ಮೃತಪಟ್ಟ ಬಾಲಕ. ಆತ ಮನೆಯಲ್ಲಿ ದೊಡ್ಡಮ್ಮನ...

ಮಾಂಸ ಪ್ರಿಯರಿಗೆ ಬೆಲೆ ಏರಿಕೆ ಶಾಕ್.. ಕೋಳಿ ಮಾಂಸದ ದರ ಏರಿಕೆ

ಮಂಗಳೂರು: ಕೋಳಿಮಾಂಸ, ಮೀನಿನ ದರ ಏರುಗತಿ ಯಲ್ಲಿ ಸಾಗುತ್ತಿದ್ದು ಮಾಂಸಾಹಾರ ಪ್ರಿಯರ ಜೇಬಿಗೂ ಕತ್ತರಿ ಬೀಳುವಂತಾಗಿದೆ. ಪ್ರಸ್ತುತ ಕೋಳಿಮಾಂಸಕ್ಕೆ (ವಿದ್‌ ಸ್ಕಿನ್‌) ಕೆ.ಜಿ.ಗೆ ಬ್ರಾಯ್ಲರ್‌ ಕೆಲವು ಕಡೆ 235-240 ರೂ., ಟೈಸನ್‌ 270 ರೂ....