ಬಂಟ್ವಾಳ: ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ಬಂಟ್ವಾಳ ತಾಲೂಕು ಸಮಿತಿ ವತಿಯಿಂದ ಕೇಂದ್ರ ಸರಕಾರದ ವಿರುದ್ದ ರಾಷ್ಟ್ರ ವ್ಯಾಪ್ತಿ ಮುಷ್ಕರದ ಅಂಗವಾಗಿ ಸಾಮೂಹಿಕ ಧರಣಿ ಬಿಸಿರೋಡನ ಮಿನಿ ವಿಧಾನಸೌಧದ ಮುಂಭಾಗದಲ್ಲಿ ನಡೆಯಿತು.
ಬೆಲೆ ಏರಿಕೆ, ಕನಿಷ್ಟ ವೇತನ ರೂ.21,000 ನಿಗದಿಪಡಿಸಿ, ಲೇಬರ್ ಕೋಡ್ ರದ್ದುಗೊಳಿಸಿ, ಗುತ್ತಿಗೆ ಮತ್ತು ಸ್ಕೀಂ ನೌಕರರನ್ನು ಖಾಯಂಗೊಳಿಸಿ, ಸರಕಾರಿ ಕ್ಷೇತ್ರದ ಕೈಗಾರಿಕೆಗಳ ಖಾಸಗೀಕರಣ ನಿಲ್ಲಿಸಿ, ಬ್ಯಾಂಕ್ ವಿಲೀನಿಕರಣ ನಿಲ್ಲಿಸಿ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.