Saturday, October 21, 2023

ಆನೆಕಲ್ಲು ಶ್ರೀ ಜಲದುರ್ಗೆ ದೇವಸ್ಥಾನದ ನದಿ ದಂಡೆ ಸಂರಕ್ಷಣಾ ತಡೆಗೋಡೆಗೆ ಶಿಲಾನ್ಯಾಸ

Must read

ಬಂಟ್ವಾಳ: ಸಣ್ಣ ನೀರಾವರಿ ಇಲಾಖೆಯಿಂದ ಕರೋಪಾಡಿ ಗ್ರಾಮದ ಆನೆಕಲ್ಲು ಶ್ರೀ ಜಲದುರ್ಗೆ ದೇವಸ್ಥಾನದ ನದಿ ದಂಡೆ ಸಂರಕ್ಷಣಾ ತಡೆಗೋಡೆಗೆ ರೂ.75 ಲಕ್ಷದಲ್ಲಿ ನಡೆಯುವ ಕಾಮಗಾರಿಗೆ ಪೂಜ್ಯ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹಾಗೂ ಕಾಣಿಯೂರು ಶ್ರೀ ಮಹಾಬಲ ಸ್ವಾಮಿಜಿಗಳ ಉಪಸ್ಥಿತಿಯಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಶಿಲಾನ್ಯಾಸ ನೆರೆವೇರಿಸಿದರು. ಈ ಸಂದರ್ಭದಲ್ಲಿ ಹರೀಶ್ ಬೇಡಗುಡ್ಡೆ, ಲಿಂಗಪ್ಪ ಗೌಡ, ರಘುನಾಥ ಶೆಟ್ಟಿ, ಬೇಬಿ ಆರ್. ಶೆಟ್ಟಿ, ಅಶ್ವಥ್ ಶೆಟ್ಟಿ, ಶ್ಯಾಮ್ ಭಟ್, ಗಣಪತಿ ಭಟ್, ಅಭಿಷೇಕ್ ರೈ, ಸಣ್ಣ ನೀರಾವರಿ ಇಲಾಖೆಯ ಅಭಿಯಂತರರು ಶಿವಪ್ರಸನ್ನ, ಉಪಸ್ಥಿತರಿದ್ದರು.

More articles

Latest article