ವಿಟ್ಲ: ಬೊಳಂತಿಮೊಗರು ಹಿರಿಯ ಪ್ರಾಥಮಿಕ ಶಾಲೆ, ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ, ಶಿಕ್ಷಕ ರಕ್ಷಕ ಸಮಿತಿ ಸಹಯೋಗದಲ್ಲಿ ಶಾಲಾ ಅಮೃತ ಮಹೋತ್ಸವ ಸಂದರ್ಭದಲ್ಲಿ ನಿರ್ಮಾಣಗೊಂಡ ಬಯಲು ರಂಗಮಂದಿರ ’ಅಮೃತಕಲಶ’ ಹಾಗೂ ಎರಡು ತರಗತಿ ಕೊಠಡಿಗಳ ಶಾಲಾರ್ಪಣೆ ಹಾಗೂ ಪ್ರಾಥಮಿಕ ಮತ್ತು ಪ್ರೌಢಶಾಲಾ ಜಂಟಿ ವಾರ್ಷಿಕೋತ್ಸವ ಸಮಾರಂಭ ಭಾನುವಾರ ನಡೆಯಿತು.
ಉದ್ಯಮಿ ಸುಬ್ರಾಯ ಪೈ ಹಾಗೂ ಉದ್ಯಮಿ ದಿವಾಕರ ದಾಸ್ ನೇರ್ಲಾಜೆ ಅವರು ತರಗತಿ ಕೊಠಡಿ ಉದ್ಘಾಟಿಸಿದರು. ಪಟ್ಟಣ ಪಂಚಾಯತ್ ಅಧ್ಯಕ್ಷೆ ದಮಯಂತಿ ಉದ್ದ ಜಿಗಿತ ಪಿಟ್ ಉದ್ಘಾಟಿಸಿದರು.
ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ಹಸೈನಾರ್ ನೆಲ್ಲಿಗುಡ್ಡೆ ಗ್ರಂಥಾಲಯ ಉದ್ಘಾಟಿಸಿದರು. ಸದಸ್ಯೆ ಇಂದಿರಾ ಅಡ್ಡಾಳಿ ಕೈ ತೊಳೆಯುವ ಘಟಕ ಉದ್ಘಾಟಿಸಿದರು. ಮಾಜಿ ಸಚಿವ ಬಿ. ರಮಾನಾಥ ರೈ ಶುಭ ಹಾರೈಸಿದರು.
ವಿಟ್ಲ ಪಟ್ಟಣ ಪಂಚಾಯತ್ ಸದಸ್ಯೆ ಲತಾ ಅಶೋಕ್, ಎಂ.ಆರ್.ಪಿ.ಎಲ್ ಮುಖ್ಯ ಮಹಾಪ್ರಬಂಧಕ ಯೋಗೀಶ್ ನಾಯಕ್, ವಿಟ್ಲ ಅಧ್ಯಾಪಕ ಸಹಕಾರಿ ಸಂಘದ ಅಧ್ಯಕ್ಷ ಮೋನಪ್ಪ ಕೆ, ವ್ಯವಸ್ಥಾಪಕ ಕೃಷ್ಣ ಪ್ರಕಾಶ್, ಉಪಾಧ್ಯಕ್ಷ ರಾಜೇಂದ್ರ ರೈ ಅಳಿಕೆ, ನಿವೃತ್ತ ಶಿಕ್ಷಕ ಪಿ.ಡಿ ಶೆಟ್ಟಿ ವನಭೋಜನ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಟಿ ಶೈಲಜಾ ಭಟ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಜೂಲಿಯಾನಾ ಮೇರಿ ಲೋಬೋ, ವಿಟ್ಲ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಅರುಣ್ ಎಂ ವಿಟ್ಲ, ಹನೀಫ್ ಸ ಅದಿ, ಎಂಆರ್ ಪಿಎಲ್ ನ ಶ್ರೀಶಾ, ಶಾಲಾ ಎಸ್ಡಿಎಂಸಿ ಅಧ್ಯಕ್ಷ ಪುರಂದರ ಅಂಚನ್, ಪ್ರೌಢ ಶಾಲಾ ವಿಭಾಗದ ಎಸ್ಡಿಎಂಸಿ ಕಾರ್ಯಾಧ್ಯಕ್ಷ ಜಗದೀಶ್ಚಂದ್ರ ಗೌಡ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ನಾರಾಯಣ ಗೌಡ, ಉಪಸ್ಥಿತರಿದ್ದರು.
ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ ಸಂಜೀವ ಎಚ್ ಸ್ವಾಗತಿಸಿದರು. ಕಟ್ಟಡ ರಚನಾ ಸಮಿತಿ ಅಧ್ಯಕ್ಷ ವಿಶ್ವನಾಥ ನಾಯ್ತೊಟ್ಟು ಪ್ರಸ್ತಾವಿಸಿದರು. ಕೇಶವಯ್ಯ ವರದಿ ಮಂಡಿಸಿದರು. ವಿಠಲ ನಾಯಕ್ ನಿರೂಪಿಸಿದರು. ಪ್ರಭಾರ ಮುಖ್ಯ ಶಿಕ್ಷಕ ಅನಿಲ್ ವಡಗೇರಿ ವಂದಿಸಿದರು.