ಬಂಟ್ವಾಳ: ಬುರೂಜ್ ಇಂ. ಮೀ. ಹೈಸ್ಕೂಲ್ ರಝಾನಗರ ಇಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಪ್ರಯುಕ್ತ ಶಾಲೆಯಲ್ಲಿ ವಿಶ್ವ ಮಾನವ ದಿನವನ್ನು ಆಚರಿಸಲಾಯಿತು. ಕುವೆಂಪು ಅವರ ಭಾವಚಿತ್ರಕ್ಕೆ ಶಾಲಾ ಸಂಚಾಲಕರು ಮತ್ತು ಶಿಕ್ಷಕ ವೃಂದದವರು ಪುಷ್ಪಾರ್ಚನೆಗೈದರು. ಕುವೆಂಪು ಅವರು ರಚಿಸಿರುವ ಗೀತೆಗಳನ್ನು ವಿದ್ಯಾರ್ಥಿಗಳು ಹಾಡಿದರು. ಸಹಶಿಕ್ಷಕಿ ಕು.ಶೋಭಾ ಕುವೆಂಪು ಸಾರಿದ ವಿಶ್ವ ಮಾನವ ಸಂದೇಶವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.