ಬಂಟ್ವಾಳ; ” ನ್ಯೂ ಕರಾಟೆ ಕ್ಲಾಸ್ ” ನ ವತಿಯಿಂದ ಕರಾಟೆ ತರಬೇತಿ ಕೇಂದ್ರ ಬಂಟ್ವಾಳ ವಿ.ಎನ್.ಆರ್.ಗೊಲ್ಡ್ ನ ಸ್ವರ್ಣ ಸೌಧದ ಎರಡನೇ ಮಹಡಿಯ ಲ್ಲಿ ಬೆಳಿಗ್ಗೆ ಉದ್ಘಾಟನೆ ನಡೆಯಿತು.
ಉದ್ಯಮಿ ನಾಗೇಂದ್ರ ಬಾಳಿಗಾ ಕೇಂದ್ರ ವನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಶಸ್ತ್ರ ಗಳು ಇಲ್ಲದೆ ಸ್ವರಕ್ಷಣೆಗಾಗಿ ಇರುವ ವಿದ್ಯೆ ಕರಾಟೆ.
ಕರಾಟೆಯ ಜೊತೆ ಯಾವುದೇ ವ್ಯಾಯಾಮಗಳು ಆರೋಗ್ಯ ಕ್ಕಾಗಿ , ಪ್ರತಿಯೊಬ್ಬರು ಆರೋಗ್ಯ ಸಮೃದ್ಧಿಗಾಗಿ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳಿ ಎಂದು ಅವರು ಹೇಳಿದರು.
ವೇದಿಕೆಯಲ್ಲಿ ಕಬ್ಬಡಿ ಕ್ರೀಡಾ ಪಟು ರಾಮ್ ದಾಸ್ ಬಂಟ್ವಾಳ, ರಾಮಚಂದ್ರ ಗೌಡ,ಕರಾಟೆ ಶಿಕ್ಷಕ ಶಿಹಾನ್ ವಸಂತ್ ಕೆ. ಬಂಗೇರ, ಹಿಂದೂ ಯುವ ಸೇನೆ ತಾಲೂಕು ಅಧ್ಯಕ್ಷ ಪುಷ್ಪರಾಜ್ ಜಕ್ರಿಬೆಟ್ಟು, ಉದ್ಯಮಿ ಪ್ರಶಾಂತ್ ಭಂಡಾರ್ಕರ್, ಯುವ ಉದ್ಯಮಿ ಸಂದೀಪ್ ಬಂಟ್ವಾಳ,
ತರಬೇತಿ ಯ ಸಹಶಿಕ್ಷಕ ಸೆನ್ಸಾಯಿ ಯತೀಶ್ ಕುಮಾರ್ಣ ಉಪಸ್ಥಿತರಿದ್ದರು.
ವಸಂತ್ ಕುಮಾರ್ ಮಣಿಹಳ್ಳ ಸ್ವಾಗತಿಸಿ, ಹಿಲರಿ ಲೋಬೊ ಲೊರೆಟ್ಟೋ ವಂದಿಸಿದರು.