Sunday, October 22, 2023

ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

Must read

ಕಲ್ಲಡ್ಕ: ನ.6 ರಂದು ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ , ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದು ಹಿರಿಯ ವಿಭಾಗದ ರಸಪ್ರಶ್ನೆ ಸ್ಪರ್ಧೆಯಲ್ಲಿ 7ನೇ ತರಗತಿಯ ಶ್ರೀನಿವಾಸ, ಕೆ.ಕೆ ಧನುಷ್ ಕೆ.ಜಿ ಮಾಸ್ಟರ್, ದೀಕ್ಷಿತ್. ಧನುಷ್ ಹಾಗೂ 6ನೇ ತರಗತಿಯ ಭೂಷಣ್, ಭಾರ್ಗವರಾಮ ಪ್ರಥಮ ಸ್ಥಾನ ಪಡೆದಿರುತ್ತಾರೆ.
ಕಿರಿಯ ವಿಭಾಗದ ರಸಪ್ರಶ್ನೆಯಲ್ಲಿ 4ನೇ ತರಗತಿಯ ಪವನ್ ನಾಯಕ್, ಅಂಕಿತಾ, ಶ್ರೀವತ್ಸ, ಆಕಾಶ್, ಬ್ರಾಹ್ಮಿ, ಹಾಗೂ ಈಶಾನ್ ಪ್ರಥಮ ಸ್ಥಾನ ಪಡೆದಿರುತ್ತಾರೆ.
ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಕಿರಿಯ ವಿಭಾಗದಲ್ಲಿ ತಮಿಳು ಕಂಠಪಾಠ ಸ್ಪರ್ಧೆಯಲ್ಲಿ ೩ನೇ ತರಗತಿಯ ರಮ್ಯ ತೃತೀಯ ಸ್ಥಾನ, ಹಾಗೂ ಹಿರಿಯ ವಿಭಾಗದ ಕನ್ನಡ ಕಂಠಪಾಠ ಸ್ಪರ್ಧೆಯಲ್ಲಿ ೬ನೇ ತರಗತಿಯ ವಾಸವಿ ಕೆ.ಸಿ ತೃತೀಯ ಸ್ಥಾನ ಪಡೆದಿರುತ್ತಾರೆ.

More articles

Latest article