ಬಂಟ್ವಾಳ: ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ 15 ಲಕ್ಷ ಅನುದಾನದಲ್ಲಿ ಇರ್ವತ್ತೂರು ಗ್ರಾಮದ ಮಣ್ಣೂರು ಮತ್ತು ಪಂಜೋಡಿ ರಸ್ತೆಯ ಕಾಂಕ್ರೀಟಿಕರಣದ ಗುದ್ದಲಿ ಪೂಜೆಯನ್ನು ಸಂಗಬೆಟ್ಟು ಕ್ಷೇತ್ರದ ಜಿ.ಪಂ ಸದಸ್ಯರಾದ ತುಂಗಪ್ಪ ಬಂಗೇರ ನೆರವೇರಿಸಿದರು. ಈ ಸಂದರ್ಭದಲ್ಲಿ ತಾ.ಪಂ ಸದಸ್ಯ ರಮೇಶ್ ಕುಡುಮೇರು, ಸುಜಾತ, ಪ್ರಕಾಶ್,ಶಂಕರ ಶೆಟ್ಟಿ ಬೆದ್ರ್ಮಾರು, ದಯಾನಂದ ಕುಲಾಲ್, ಸುಂದರ್ ನಾಯ್ಕ ಜಾರಿಗೆದಡಿ, ರವಿಶಂಕರ್ ಹೊಳ್ಳ, ದಯಾನಂದ ನಾಯ್ಕ ಎರ್ಮೆನಾಡು ಹಾಗೂ ಸ್ಥಳಿಯರು ಉಪಸ್ಥಿತರಿದ್ದರು.