ವಿಟ್ಲ: ನಲ್ಕ ಸಮೀಪದ ಕಲ್ಲುಕುಟ್ಟಿಮೂಲೆಯಲ್ಲಿ ನವರಾತ್ರಿಯ ಸಂದರ್ಭದಲ್ಲಿ ತ್ರಿಕಾಲ ಪೂಜೆಯ ಬಳಿಕ ‘ಸುಭದ್ರಾ ಕಲ್ಯಾಣ’ ಯಕ್ಷಗಾನ ತಾಳಮದ್ದಳೆ ಸೇವೆ ಜರುಗಿತು.
ಭಾಗವತರಾಗಿ ಪುತ್ತೂರು ರಮೇಶ್ ಭಟ್, ಸಾಯ ತಿರುಮಲೇಶ್ವರ ಭಟ್, ಚೆಂಡೆ ಮದ್ದಳೆ ವಾದಕರಾಗಿ ದಂಬೆ ಈಶ್ವರ ಶಾಸ್ತ್ರಿ, ವಿಷ್ಣು ಶರಣ ಕೀರಿಕ್ಕಾಡು, ನರಸಿಂಹ ಭಟ್ ಕಲ್ಲುಕುಟ್ಟಿ ಮೂಲೆ, ಧನ್ಯಶ್ರೀ, ಶ್ರಾವ್ಯಶ್ರೀ ಕಲ್ಲುಕುಟ್ಟಿ ಮೂಲೆ, ಅಕ್ಷರ ಶ್ಯಾಮ ಮಳಿ ಅವರುಗಳು ಭಾಗವಹಿಸಿದರು.
ಅರ್ಥಧಾರಿಗಳಾಗಿ ರಾಧಾಕೃಷ್ಣ ಕಲ್ಚಾರ್, ಕೀರಿಕ್ಕಾಡು ಗಣೇಶ ಶರ್ಮಾ, ಹರೀಶ್ ಬೊಳಂತಿಮೊಗರು, ಎಲ್.ಎನ್.ಭಟ್ ಮಳಿ, ಅಶೋಕ ಸುಬ್ರಹ್ಮಣ್ಯ ಭಟ್ ಪೆರುವಡಿ, ದೇವರಗುಂಡಿ ರಾಮಚಂದ್ರ ಭಟ್ ಸಹಕರಿಸಿದರು.
ವೇ.ಮೂ.ಕಲ್ಲುಕುಟ್ಟಿಮೂಲೆ ರವಿಶಂಕರ್ ಭಟ್ ಅವರು ಶ್ರೀದೇವಿಯ ಪ್ರಸಾದ ನೀಡಿ ಕಲಾವಿದರನ್ನು ಆಶೀರ್ವದಿಸಿದರು.