Friday, October 27, 2023

ಅಳಿಕೆ: ಹಿಂದೂ ರುದ್ರಭೂಮಿ ಶಿಲಾನ್ಯಾಸ

Must read

ವಿಟ್ಲ: ಅಳಿಕೆ ಗ್ರಾಮದ ಹೊಲಬೈಲು ಎಂಬಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಸಂಘಸಂಸ್ಥೆ ಹಾಗೂ ದಾನಿಗಳ ಸಹಕಾರದಲ್ಲಿ ೩೫ ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಹಿಂದೂ ರುದ್ರಭೂಮಿಗೆ ಶಿಲಾನ್ಯಾಸ ಗುರುವಾರ ನಡೆಸಲಾಯಿತು.
ಅಳಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು ಶಿಲಾನ್ಯಾಸ ನಡೆಸಿದರು. ಈ ಸಂದರ್ಭ ಮಾತನಾಡಿದ ಅವರು ಗ್ರಾಮ ಪಂಚಾಯಿತಿ ವತಿಯಿಂದ 12 ಲಕ್ಷ ಅನುದಾನ ಇಡಲಾಗಿದೆ. ಸಂಘಸಂಸ್ಥೆ, ದಾನಿಗಳ ಬಳಿ ತೆರಳಿ ಸಹಕಾರ ನೀಡುವಂತೆ ಮನವಿ ಸಲ್ಲಿಸಲಾಗುವುದು. ಸುಸಜ್ಜಿತವಾದ ರುದ್ರಭೂಮಿ ನಿರ್ಮಾಣಗೊಳ್ಳಲಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಪಿಡಿಒ ಜಿನ್ನಪ್ಪ ಗೌಡ, ಹಿಂದೂ ರುದ್ರಭೂಮಿ ನಿರ್ಮಾಣ ಸಮಿತಿ ಅಧ್ಯಕ್ಷ ರಾಜೇಂದ್ರ ರೈ, ಸದಸ್ಯರಾದ ಈಶ್ವರ ನಾಯ್ಕ, ಅಣ್ಣು ಕುಲಾಲ್, ಬಾಲಕೃಷ್ಣ ಪೂಜಾರಿ, ನೇಮಿರಾಜ್ ಚೆಂಡುಕಳ, ಗೋಪಾಲಕೃಷ್ಣ ವಿ, ತಿಮ್ಮಪ್ಪ ಶೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯರಾದ ಸದಾಶಿವ ಶೆಟ್ಟಿ, ಸುಧಾಕರ, ಸೆಲ್ವಿನ್ ಡಿಸೋಜ, ರವೀಶ, ಗಿರಿಜಾ, ಕವಿತಾ ರಮೇಶ್, ಗುತ್ತಿಗೆದಾರ ಗೋಪಾಲಕೃಷ್ಣ ನಾಯಕ್ ಉಪಸ್ಥಿತರಿದ್ದರು.

 

More articles

Latest article