Tuesday, October 17, 2023

ಪ್ರಾಂತ ಮತ್ತು ಕ್ಷೇತ್ರ ಮಟ್ಟದಜ್ಞಾನ ವಿಜ್ಞಾನ ಮೇಳ

Must read

ಪ್ರಾಂತ ಮತ್ತು ಕ್ಷೇತ್ರ ಮಟ್ಟದ ಜ್ಞಾನ ವಿಜ್ಞಾನ ಮೇಳ ಸ್ಪರ್ಧೆಯು ಜಯಗೋಪಾಲ ಗರೋಡಿಯ ರಾಷ್ಟ್ರೋತ್ಥಾನ ಶಾಲೆ ಬೆಂಗಳೂರು ಇಲ್ಲಿ ನಡೆಯಿತು. ಈ ಸ್ಪರ್ಧೆಯಲ್ಲಿ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಪ್ರಾಂತ(ರಾಜ್ಯ)ಮಟ್ಟದ ಸಂಸ್ಕೃತಿಜ್ಞಾನ ರಸಪ್ರಶ್ನೆಯಲ್ಲಿ ದೀಕ್ಷಿತ್, ಶ್ರೀನಿವಾಸ ಮತ್ತು ಭೂಷಣ್, ಕಥಾಕಥನ ಸ್ಪರ್ಧೆಯಲ್ಲಿ ಅಕ್ಷತಾಲಕ್ಷ್ಮೀ, ವಿಜ್ಞಾನ ಪ್ರಯೋಗದಲ್ಲಿ ಶ್ರಮಿಕ ಪ್ರಥಮ ಸ್ಥಾನ ಪಡೆದು ಕ್ಷೇತ್ರ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ವಿಜ್ಞಾನ ಮಾದರಿಯಲ್ಲಿ ಕುಶಿ ಎ ಪೂಜಾರಿ ಮತ್ತು ಅನಘ ಯು ವಿ ಭಟ್, ಗಣಿತ ಮಾದರಿಯಲ್ಲಿ ಚೇತನಾ, ವೇದಗಣಿತ ರಸಪ್ರಶ್ನೆಯಲ್ಲಿ ಚಿನ್ಮಯಿ, ಆಶಿಕಾ ಮತ್ತು ವಾಸವಿ ತೃತೀಯ ಸ್ಥಾನ ಗಳಿಸಿರುತ್ತಾರೆ.
ದಕ್ಷಿಣಮಧ್ಯಕ್ಷೇತ್ರ ಮಟ್ಟದ ಸಂಸ್ಕೃತಿ ಜ್ಞಾನ ರಸಪ್ರಶ್ನೆಯಲ್ಲಿ 7ನೇ ತರಗತಿಯ ದೀಕ್ಷಿತ್ ಹಾಗೂ ಶ್ರೀನಿವಾಸ, ೬6ನೇ ತರಗತಿಯ ಭೂಷಣ್ ದ್ವಿತೀಯ ಸ್ಥಾನ ಪಡೆದು ಶಾಲೆಯಕೀರ್ತಿಯನ್ನು ಹೆಚ್ಚಿಸಿರುತ್ತಾರೆ. ಇವರಿಗೆ ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು ಹಾಗೂ ಅಧ್ಯಾಪಕ ವೃಂದ ಅಭಿನಂದಿಸಿದರು.

More articles

Latest article