ಬಂಟ್ವಾಳ: ಸುಸಂಸ್ಕೃತ ಬದುಕು ಬೇಕಾದಲ್ಲಿ ಆಧ್ಯಾತ್ಮದ ಶಿಕ್ಷಣವೂ ಬೇಕು. ಆಧ್ಯಾತ್ಮದಿಂದ ಧರ್ಮದ ಉಳಿವು. ಸುಂದರ ಬದುಕಿಗೆ ಧರ್ಮದ ಅನುಷ್ಠಾನವಾಗಬೇಕು ಎಂದು ಗುರುಪುರ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.
ಬಂಟ್ವಾಳ ತಾ| ಇರ್ವತ್ತೂರುಪದವು ಶ್ರೀ ಶಾರದೋತ್ಸವ ಸಮಿತಿ ಇದರ ಆಶ್ರಯದಲ್ಲಿ ಮೂಡುಪಡುಕೋಡಿ ಸ.ಹಿ.ಪ್ರಾ. ಶಾಲಾ ವಠಾರದಲ್ಲಿ ನಡೆದ 3ನೇ ವರ್ಷದ ಶ್ರೀ ಶಾರದಾ ಪೂಜೆಯ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಬದುಕು ಪರಿಶ್ದ್ಧುವಾಗಿರಬೇಕಾದರೆ ಜ್ಞಾನ ಬೇಕು. ಶಾರದೆಯ ಆರಾಧನೆಯಿಂದ ಇಚ್ಛಾ ಶಕ್ತಿ, ಜ್ಞಾನ ಶಕ್ತಿ, ಕ್ರಿಯಾಶಕ್ತಿಯ ಉದ್ದೀಪನವಾಗುವುದು ಎಂದು ಅವರು ನುಡಿದರು.
ವಾಮದಪದವು ಸ. ಪ್ರ. ದ. ಕಾಲೇಜು ಪ್ರಾಂಶುಪಾಲ ಪ್ರೊ| ಹರಿಪ್ರಸಾದ್ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಲೆಗಳಲ್ಲಿ ಶಾರದೆಯ ಆರಾಧನೆ ಪುಣ್ಯ ಕಾರ್ಯವಾಗಿದ್ದು ಎಲ್ಲರನ್ನೂ ಒಗ್ಗೂಡಿಸುತ್ತದೆ ಎಂದರು.
ಗುತ್ತಿಗೆದಾರ ಮೋಹನ ಶೆಟ್ಟಿ ನರ್ವಲ್ದಡ್ಡ, ಸಮಿತಿ ಕಾರ್ಯಾಧ್ಯಕ್ಷ, ಉದ್ಯಮಿ ಹರೀಂದ್ರ ಪೈ, ಉದ್ಯಮಿಗಳಾದ ಉಮೇಶ್ ಶೆಟ್ಟಿ, ಜಯರಾಜ ಅತ್ತಾಜೆ, ಒಡಿಯೂರು ಗ್ರಾ. ವಿಕಾಸ ಯೋಜನೆ ವಿಸ್ತರಣಾಽಕಾರಿ ಸುಧಾಕರ ಅಳಿಕೆ ಶುಭ ಹಾರೈಸಿದರು. ಸಮಿತಿ ಪದಾಽಕಾರಿಗಳಾದ ರಮೇಶ್ ಗೌಡ ಸೇವಾ, ದಯಾನಂದ ಎರ್ಮೆನಾಡು, ಶ್ರೀನಿವಾಸ ಪೂಜಾರಿ, ಸುಪ್ರೀತ್ ಜೈನ್, ಪ್ರಶಾಂತ್ ದೇವಾಡಿಗ, ಹರೀಶ್ ಪೂಜಾರಿ ಮತ್ತು ಸದಸ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಾಧಕರಾದ ನಿವೃತ್ತ ಮುಖ್ಯ ಶಿಕ್ಷಕ ನಾರಾಯಣ ನಾಯಕ್ ಕರ್ಪೆ ಅವರಿಗೆ ಶಾರದಾ ತಿಲಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಚಿತ್ರ ಕಲಾವಿದ ಚಿದಾನಂದ, ಗಾಯಕ ಉಮೇಶ್ ವಾಮದಪದವು, ಮೆಸ್ಕಾಂ ಅಭಿಯಂತರ ರಂಗಸ್ವಾಮಿ, ಸಿಬಂದಿ ವಿಜಯ ಅವರನ್ನು ಸಮ್ಮಾನಿಸಲಾಯಿತು. ಶಾಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸಮಿತಿ ಅಧ್ಯಕ್ಷ ಡಾ| ರಾಮಕೃಷ್ಣ ಎಸ್. ಸ್ವಾಗತಿಸಿದರು. ಸಮಿತಿ ಗೌರವಾಧ್ಯಕ್ಷ ರಾಜೀವ ಶೆಟ್ಟಿ ಎಡ್ತೂರು ಪ್ರಸ್ತಾವಿಸಿದರು. ಗ್ರಾ.ಪಂ.ಉಪಾಧ್ಯಕ್ಷ ಶಂಕರ ಶೆಟ್ಟಿ ಬೆದ್ರಮಾರ್ ವಂದಿಸಿದರು. ಮನ್ಮಥ್ ಶೆಟ್ಟಿ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು.