ವಿಟ್ಲ: ಕೇರಳದ ಕಸಾಯಿಖಾನೆಗೆ ದನಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ಪತ್ತೆ ಹಚ್ಚಿದ ವಿಟ್ಲ ಪೊಲೀಸರ ತಂಡ ಎರಡು ದನ, ವಾಹನ ಹಾಗೂ ಒಬ್ಬ ಆರೋಪಿಯನ್ನು ವಶಕ್ಕೆ ಪಡೆದುಕೊಂಡ ಘಟನೆ ಕೊಳ್ನಾಡು ಗ್ರಾಮದ ಬಾರೆಬೆಟ್ಟು ಸಮೀಪದ ಮುಂಡತ್ತಜೆ ಎಂಬಲ್ಲಿ ನಡೆದಿದೆ.
ಸಾಲೆತ್ತೂರು ಕಟ್ಟೆ ನಿವಾಸಿ ಉಸ್ಮಾನ್ ಶಾಫಿ(28) ಬಂಧಿತ ಆರೋಪಿ.
ಈತ ಕೋಡದವು ಕರೈ ರಸ್ತೆಯಲ್ಲಿ ದನಗಳನ್ನು ಸಾಗಾಟ ಮಿನಿ ಟೆಂಪೋದಲ್ಲಿ ಒಂದು ಹೋರಿ ಹಾಗೂ ಒಂದು ಹಸು ಅನ್ನು ಸಾಗಾಟ ಮಾಡುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ವಿಟ್ಲ ಎಸೈ ಯಲ್ಲಪ್ಪ, ಸಿಬ್ಬಂದಿಗಳಾದ ಜಯಕುಮಾರ್ ಹಾಗೂ ಪ್ರತಾಪ್ ರೆಡ್ಡಿ ಅವರ ತಂಡ ಅಡ್ಡಗಟ್ಟಿದೆ. ಸಾಲೆತ್ತೂರು ತಲೆಕ್ಕಿ ಮೂಲಕ ಕೇರಳದ ಕಸಾಯಿಖಾನೆಗೆ ವಧೆಗೆ ದನಗಳನ್ನು ಸಾಗಾಟ ಮಾಡುತ್ತಿದ್ದ ಬಗ್ಗೆ ಬೆಳಕಿಗೆ ಬಂದಿದೆ.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಗಾಟದ ವೇಳೆ ವಾಹನಕ್ಕೆ ಬೆಂಗವಲಾಗಿ ಬೈಕಿನಲ್ಲಿ ತೆರಳುತ್ತಿದ್ದ ಕಟ್ಟತ್ತಿಲ ನಿವಾಸಿ ಸಿದ್ದಿಕ್ ಎಂಬಾತನ ಮೇಲೆ ಪ್ರಕರಣ ದಾಖಲಾಗಿದೆ.