ಬಂಟ್ವಾಳ: ಜಿಲ್ಲೆಯ ವಿವಿಧೆಡೆ ಡೆಂಗ್ ಪೀಡಿತ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು, ಮಂಗಳೂರಿನ ವಿವಿಧ ಆಸ್ಪತ್ರೆಗಳ ರಕ್ತ ನಿಧಿ (ಬ್ಲೆಡ್ ಬ್ಯಾಂಕ್)ಗಳಲ್ಲಿ ರೋಗಿಗಳಿಗೆ ಬೇಕಾದ ಪ್ಲೇಟ್ಲೆಟ್ಸ್ ರಕ್ತದ ಕೊರತೆ ಇರುವುದರಿಂದ ರಕ್ತದ ಆವಶ್ಯಕತೆ ಇರುತ್ತದೆ. ಸಾರ್ವಜನಿಕರು, ಸಾಮಾಜಿಕ ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಮುಂದಾಗುವಂತೆ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ.) ಸಂಸ್ಥೆಯು ಮನವಿ ಮಾಡಿದೆ.
ರಕ್ತದಾನ ಮಾಡ ಬಯಸುವವರು ಹಾಗೂ ತುರ್ತು ರಕ್ತದ ಅಗತ್ಯ ಕಂಡು ಬಂದರೆ ಕೂಡಲೇ ಸಂಸ್ಥೆಯ ನಿರ್ವಾಹಕರಾದ ಸಮೀರ್ ಉಳಾಯಿಬೆಟ್ಟು 9902765653, ಫೈಝಲ್ ಮಂಚಿ-9845414603, ರಾಝಿಕ್ ಚೆಂಬುಗುಡ್ಡೆ – 7760732900, ನಾಸಿರ್ ಬಿ.ಸಿ.ರೋಡ್-8197915293, ಇಮ್ರಾನ್ ಮದಕ – 7337635457 ಅವರನ್ನು ಸಂಪರ್ಕಿಸುವಂತೆ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ.)ರಕ್ತ ಪೂರೈಕಾ ವಿಭಾಗದ ಪ್ರಕಟನೆ ತಿಳಿಸಿದೆ.