ಬಂಟ್ವಾಳ : ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಮಿತಿ (ರಿ.), ಬಿ.ಸಿ.ರೋಡು ಇದರ ೩೨ನೇ ವಾರ್ಷಿಕ ಮಹಾಸಭೆ ಬಿ.ಸಿ.ರೋಡು ಗೀತಾಂಜಲಿ ಕಲ್ಯಾಣ ಮಂಟಪದಲ್ಲಿ ಯು. ಸುರೇಶ್ ನಾಯಕ್ ಇವರ ಅಧ್ಯಕ್ಷತೆಯಲ್ಲಿ ಜರಗಿತು.
ಕೋಶಾಧಿಕಾರಿ ಕೆ. ರಘುವೀರ್ ಕಾಮತ್ 2018-19ನೇ ಸಾಲಿನ ಲೆಕ್ಕ ಪತ್ರ ಮಂಡಿಸಿದರು. ಇದೇ ಸಂದರ್ಭದಲ್ಲಿ 2019-20ನೇ ಸಾಲಿನ ನೂತನ ಆಡಳಿತ ಮಂಡಳಿಯ ಆಯ್ಕೆ ನಡೆಯಿತು.
ಅಧ್ಯಕ್ಷರಾಗಿ ಯು. ಸುರೇಶ್ ನಾಯಕ್ ಉಪಾಧ್ಯಕ್ಷರಾಗಿ ಆರ್. ಮಂಜುನಾಥ ಪೈ, ಪ್ರಧಾನ ಕಾರ್ಯದರ್ಶಿಯಾಗಿ ಎಂ. ಸುಬ್ರಹ್ಮಣ್ಯ ಪೈ, ಸರ್ವಾನುಮತದಿಂದ ಪುನರಾಯ್ಕೆಗೊಂಡರು. ಜತೆ ಕಾರ್ಯದರ್ಶಿಯಾಗಿ ಎನ್. ದುರ್ಗಾದಾಸ್ ಶೆಣೈ, ಬಿ. ಕೃಷ್ಣ ನಾಯಕ್, ಕೋಶಾಧಿಕಾರಿಯಾಗಿ ಬಿ. ಮಹೇಶ್ ನಾಯಕ್, ಸದಸ್ಯರಾಗಿ ಕೆ. ಶ್ರೀಧರ್ ಹೆಗ್ಡೆ, ಎಂ. ಕೇಶವ ಪ್ರಭು, ಕೆ. ರಘುವೀರ್ ಕಾಮತ್, ಎನ್. ನಾಗೇಂದ್ರ ನಾಯಕ್, ಎಸ್. ಪವನ್ ಕುಮಾರ್ ನಾಯಕ್ ಇವರು ಆಯ್ಕೆಯಾದರು. ಲೆಕ್ಕಪರಿಶೋದಕರಾಗಿ ಪಿ. ನರೇಂದ್ರ ಪೈ ಮಂಗಳೂರು ಇವರನ್ನು ಆಯ್ಕೆ ಮಾಡಲಾಗಿದೆ.