ಬಂಟ್ವಾಳ: ಪೆರಾಜೆ ಯುವಕ ಮಂಡಲ (ರಿ) ಪೆರಾಜೆ ಇದರ ವಾರ್ಷಿಕ ಸಭೆ ಪೆರಾಜೆ ಶಾಲಾ ವಠಾರದಲ್ಲಿ ಇತ್ತಿಚಿಗೆ ನಡೆಯಿತು. ಸಭೆಯಲ್ಲಿ 2019-20 ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಯುವಕ ಮಂಡಲದ ನೂತನ ಅಧ್ಯಕ್ಷರಾಗಿ ಯುವ ವಕೀಲರಾದ ದೀಪಕ್ ಪೆರಾಜೆ ಉಪಾಧ್ಯಕ್ಷರಾಗಿ ಪ್ರಶಾಂತ್ ಮಂಜೊಟ್ಟಿ, ಕಾರ್ಯದರ್ಶಿಯಾಗಿ ಸಚಿನ್ ಮಂಜೊಟ್ಟಿ ಜೊತೆಕಾರ್ಯದರ್ಶಿಯಾಗಿ ರವಿ ಬಳ್ಳಮಜಲ್, ಕೋಶಾಧಿಕಾರಿಯಾಗಿ ನಿಶಾಂತ್ ಬೀರಕೋಡಿ ಮತ್ತು ಗೌರವಾಧ್ಯಕ್ಷರಾಗಿ ಹರೀಶ್ ಪಾಣೂರು ಹಾಗೂ ಸಂಚಾಲಕರಾಗಿ-ಮನೋಜ್ ಅಂಚನ್ , ಕ್ರೀಡಾ ಅಧ್ಯಕ್ಷರಾಗಿ ದಿನೇಶ್ ಬಡೆಕೋಡಿ ಕ್ರೀಡಾ ಕಾರ್ಯದರ್ಶಿಯಾಗಿ ಪ್ರಕಾಶ್ ಪಾಣೂರು ಸಾಂಸ್ಕೃತಿಕ ಅಧ್ಯಕ್ಷರಾಗಿ ನಿತೇಶ್ ಮುಳಿತ್ತಪಡ್ಪು ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಜಗದೀಶ ಅಡ್ಕರೆಕೋಡಿ ಮತ್ತು ಸಲಹಾ ಸಮಿತಿಯನ್ನು ಸರ್ವಾನುಮತದಿಂದ ರಚಿಸಲಾಯಿತು.