Saturday, April 6, 2024

*ಕಡಿರುದ್ಯಾವರ ನೆರೆ ಸಂತ್ರಸ್ತರಿಗೆ ಮಿಡಿದ ಕನ್ನಡಿಗರ ಪತ್ರಕರ್ತರ ಸಂಘ, ಮಹರಾಷ್ಟ್ರ.*

ಇತ್ತೀಚೆಗೆ ನೆರೆ ಪ್ರವಾಹದಿಂದ ಸಂಕಷ್ಟಕ್ಕೊಳಗಾದ ಸಂತ್ರಸ್ತರಿಗೆ ದಿನಪಯೋಗಿ ಪರಿಕರಗಳನ್ನು ವಿತರಿಸುವುದರ ಮೂಲಕ ಗ್ರಾಮಸ್ಥರ ನೋವಿಗೆ ಸ್ಪಂಧಿಸಿದ್ದಾರೆ ಮಹರಾಷ್ಟ್ರದ ಕನ್ನಡಿಗರ ಪತ್ರಕರ್ತರ ಸಂಘ. ನೆರೆಸಂತ್ರಸ್ತರಿಗೆ ನೇರವಾಗಿ ಸಹಾಯ ಹಸ್ತ ಚಾಚಬೇಕೆಂಬ ಉದ್ದೇಶದಿಂದ ಪಾತ್ರೆ, ದಿನಸಿ, ಚಹಾ ಹುಡಿ, ಸಕ್ಕರೆ, ಅಕ್ಕಿ, ಗೋಧಿ, ಔಷಧಿ, ಬ್ರಾಂಡ್ ನ್ಯೂ ಬಟ್ಟೆಬರೆ, ಬೈರಸ್, ಚಾಪೆ, ಬ್ಲ್ಯಾಂಕೆಟ್, ಬೆಡ್ ಶೀಟುಗಳನ್ನು ಹೊತ್ತು ಹಲವಾರು ಕಿ.ಮೀ ದೂರ ಕಾಲ್ನಡಿಗೆಯಲ್ಲಿ ಕಗ್ಗತ್ತಲನ್ನೂ ಕಾಣದೆ ರಾತ್ರಿ ವೇಳೆಗೂ ಮನೆಮನೆ ಭೇಟಿಗೈದು ಅವುಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ. ಕನ್ನಡಿಗರ ಪತ್ರಕರ್ತರ ಸಂಘ, ಮಹರಾಷ್ಟ್ರದ ಅಧ್ಯಕ್ಷರಾದ ರೋನ್ಸ್ ಬಂಟ್ವಾಳ್ ಮಾರ್ಗದರ್ಶನದಲ್ಲಿ, ಪತ್ರಕರ್ತರಾದ ಆರೀಫ್ ಕಲ್ಕಟ್ಟ ನೇತೃತ್ವದಲ್ಲಿ ಶಿಕ್ಷಕ ವಿಠಲ ಅಬುರ, ಮೋಹನ್ ಕುತ್ತಾರು (ಪ್ರಜಾವಾಣಿ), ವಸಂತ ಕೋಣಾಜೆ (ಉದಯವಾಣಿ) ಅಶ್ವಿನ್ ಕುತ್ತಾರು (ಮುಕ್ತ ಟಿವಿ), ಕೀರ್ತನ್ ದೇವಾಡಿಗ ಮರೋಲಿ (ವಾಯ್ಸ್ ಆಫ್ ಕರಾವಳಿ.ಕಾಂ) ಸೇರಿದಂತೆ ಸ್ಥಳೀಯ ಹಲವಾರು ಸಮಾಜ ಸೇವಕರು, ಗ್ರಾಮ ಪಂಚಾಯತ್ ಸದಸ್ಯರ ಸಹಯೋಗದಲ್ಲಿ ಉಪ್ಪಿನಂಗಡಿ, ಬೆಳ್ತಂಗಡಿ, ಚಾರ್ಮಾಡಿಗಳ ಕುಗ್ರಾಮಗಳಿಗೆ ಭೇಟಿ ನೀಡಿ ಮೂರು ದಿನ ಅಲ್ಲಿನ ತೀರಾ ಸಂತ್ರಸ್ತರಿರುವ ಕುಗ್ರಾಮಗಳ ಮನೆಮನೆಗಳಿಗೆ ತೆರಳಿ ನಿಜಾರ್ಥದ ಸೇವೆಗೆ ಪತ್ರಕರ್ತರ ಈ ಬಳಗ ಪಾತ್ರವಾಗಿದೆ. ಸೇವೆಗೆ ಕಾರಣಕರ್ತ ಸರ್ವರಿಗೂ ಗ್ರಾಮಸ್ಥರು ಅನಂತಾನಂತ ಕೃತಜ್ಞತೆಯನ್ನು ಸಲ್ಲಿದ್ದಾರೆ. ಮುಂಬಯಿನ ಎಲ್ಲಾ ತುಳುಕನ್ನಡಿಗರಿಗೆ, ವಿಶೇಷವಾಗಿ ತ್ಯಾಗಗೈದು ಸೇವೆಯಲ್ಲಿ ತೊಡಗಿಸಿ ಕೊಂಡ ತಾರಾ ಆರ್. ಬಂಟ್ವಾಳ್ ಪರಿವಾರಕ್ಕೆ ಮತ್ತು ಸರ್ವರಿಗೂ ಶ್ರೀ ಹರಿಯ ಕೃಪೆ ಹರಸಿದ್ದಾರೆ.

🖊ಜನಾರ್ದನ ಕಾನರ್ಪ.

More from the blog

ಮಂಗಳೂರು: ‘ಸ್ವೀಟ್ ಸಿಂಫನಿ ಇನ್ಸ್ಟಿಟ್ಯೂಟ್ ಆಫ್ ಮ್ಯೂಸಿಕ್’ ಸಂಸ್ಥೆಯ ಸಂಗೀತ ಕ್ಷೇತ್ರದಲ್ಲಿ ಸಂಪುಟ 2′ ರ ನೂತನ ಕೃತಿ ಲೋಕಾರ್ಪಣೆ

ಮಂಗಳೂರು: ಮಂಗಳೂರಿನ ಕುಲಶೇಖರದಲ್ಲಿರುವ 'ಸ್ವೀಟ್ ಸಿಂಫನಿ ಇನ್ಸ್ಟಿಟ್ಯೂಟ್ ಆಫ್ ಮ್ಯೂಸಿಕ್' ಸಂಸ್ಥೆಯ ಪ್ರಕಾಶನದಲ್ಲಿ ಇಂಗ್ಲಿಷ್, ಹಿಂದಿ ಮತ್ತು ಕನ್ನಡದ ಜನಪ್ರಿಯ ಹಾಡುಗಳನ್ನು ಪಾಶ್ಚಿಮಾತ್ಯ ನೊಟೇಶನ್ ಮೂಲಕ ವಯಲಿನ್, ಗಿಟಾರ್ ಮತ್ತು ಕೀಬೋರ್ಡ್ ನಲ್ಲಿ...

ಆಭರಣ ಪ್ರಿಯರಿಗೆ ಗುಡ್‌ನ್ಯೂಸ್‌ : ವಾರಾಂತ್ಯದಲ್ಲಿ ಚಿನ್ನದ ದರ ತುಸು ಇಳಿಕೆ…

ಬೆಂಗಳೂರು: ಚಿನ್ನದ ದರದಲ್ಲಿ ಮತ್ತೆ ಹಾವು ಏಣಿಯಾಟ ಶುರುವಾಗಿದೆ. ಕಳೆದೆರಡು ದಿನಗಳಿಂದ ನಿರಂತರ ಏರಿಕೆ ಕಂಡಿದ್ದ ಬಂಗಾರದ ಬೆಲೆ ಇದೀಗ ಇಳಿಕೆಯಾಗಿದೆ. ನಿನ್ನೆಯ ದರಕ್ಕೆ ಹೋಲಿಸಿದರೆ 10ಗ್ರಾಂ ಚಿನ್ನದ ಮೇಲೆ 450 ರೂ...

ನೀತಿ ಸಂಹಿತೆ ಇರುವಾಗ ಆಶ್ಲೇಷ ಬಲಿ ಮಂಟಪ ಕಾಮಗಾರಿ ಆರಂಭ ಸಮರ್ಪಕವಲ್ಲ- ಹರೀಶ್ ಇಂಜಾಡಿ

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಈ ಹಿಂದಿನ ಆಡಳಿತ ಮಂಡಳಿಯ ಕೊನೇ ದಿನಗಳಲ್ಲಿ ದಾನಿಗಳು ಕ್ಷೇತ್ರದಲ್ಲಿ ಆಶ್ಲೇಷ ಬಲಿ ಮಂಟಪ ನಿರ್ಮಿಸಲು ಮುಂದೆ ಬಂದರು. ಇದು ಸ್ವಾಗತಾರ್ಹ ಬೆಳವಣಿಗೆ. ಆದರೆ...

ಪ್ರಧಾನಿ ಮೋದಿ ಕರೆ : ಪ್ರತಿಯೊಬ್ಬರ ಕೈ ಮೇಲೆ ಕಮಲದ ಹಚ್ಚೆ ಹಾಕಿ

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ  ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಪ್ರತಿಯೊಬ್ಬರ ಕೈ ಮೇಲೆ ಕಮಲದ ಹಚ್ಚೆ ಹಾಕಿ “ಮೆಹಂದಿ ಅಭಿಯಾನ" ನಡೆಸುವಂತೆ ಸೂಚನೆ ನೀಡಿದ್ದಾರೆ. ಜತೆಗೆ ಮೋದಿ...