ಬಂಟ್ವಾಳ : ಶಾಸಕರ ಅನುದಾನದಲ್ಲಿ ನಿರ್ಮಿಸಿದ ಪುರಸಭಾ ವ್ಯಾಪ್ತಿಯ ಬಿ.ಮೂಡ ಗ್ರಾಮದ ಸಂಚಯಗಿರಿ 4 ನೇ ಮುಖ್ಯ ಕಾಂಕ್ರೀಟು ರಸ್ತೆ ಯನ್ನು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಉದ್ಘಾಟಿಸಿದ ರು.
ಬಳಿಕ ಸಂಚಯಗಿರಿ ನಾಗರಿಕ ಕ್ರೀಯಾ ಸಮಿತಿ ವತಿಯಿಂದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಲ್ಲಿ ನಡೆದ ಸಭಾ ಕಾರ್ಯಕ್ರಮ ದಲ್ಲಿ ಶಾಸಕ ರಾಜೇಶ್ ನಾಯಕ್ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ ಎಂಬ ಉದ್ದೇಶದಿಂದ ಈ ಭಾಗದ ನಿವಾಸಿಗಳಿಗೆ ಬಟ್ಟೆ ಕೈ ಚೀಲ ನೀಡಿದರು.
ಸ್ವಚ್ಚಭಾರತ ಪರಿಕಲ್ಪನೆ ಗೆ ಈ ಕಾರ್ಯಕ್ರಮ ಸಾಥ್ ನೀಡಿದೆ.
ಪ್ರತಿ ವಾರ್ಡ್ ನಲ್ಲೂ ಇಂತಹ ಕಾರ್ಯಕ್ರಮ ಗಳ ಮೂಲಕ ಜಾಗೃತಿ ಯಾಗಬೇಕಾಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಹೇಳಿದರು.
ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ ಇತರರಿಗೆ ಮಾದರಿಯಾದ ಈ ಬಡಾವಣೆ ಯ ಮೂಲಕ ಇನ್ನಷ್ಟು ಉತ್ತಮ ಕಾರ್ಯಗಳು ನಡೆಯಲಿ ಎಂದು ಅವರು ಹೇಳಿದರು.
ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ವಿದ್ಯಾವತಿ ಪ್ರಮೋದ್ ಕುಮಾರ್, ಜಯಂತಿ ವಸಂತ್, ಪ್ರಮುಖರಾದ ತುಕರಾಮ್ ಪೂಜಾರಿ, ಸೀತಾರಾಮ ಮಯ್ಯ, ಪಾಂಡುರಂಗ ನಾಯಕ್, ರಾಜಮಣಿ ರಾಮಕುಂಜ,ದಾಮೋದರ್ , ಕಿಶೋರ್ ಕೃಷ್ಣವಿಲಾಸ್, ರಮೇಶ್ ಸಾಲಿಯಾನ್ , ರಾಜಣ್ಣ, ಸುಧಾಕರ ಸಾಲಿಯಾನ್, ಪ್ರಮೋದ್ ಕುಮಾರ್ ಅಜ್ಜಿಬೆಟ್ಟು, ಭಾಸ್ಕರ ಟೈಲರ್, ಶ್ರೀನಿವಾಸ ಮಲ್ಲಿ, ಪ್ರದೀಪ್ ಅಜ್ಜಿಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.