ವಿಟ್ಲ: ಪುಣಚ ಶ್ರೀದೇವಿ ಪ್ರೌಢಶಾಲೆಯಲ್ಲಿ ದೇವಿನಗರ ಪುಣಚದಲ್ಲಿ ಆಷಾಢ ಹುಣ್ಣಿಮೆ ಗುರು ಪೂಜೆಯನ್ನು ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಅರವಿಂದ ಕುಡ್ಲ ಗುರು ಪೂಜಾ ದಿನದ ವಿಶೇಷತೆಯ ಬಗ್ಗೆ ಮಾತನಾಡಿದರು.
ಪ್ರೌಢಶಾಲಾ ಮುಖ್ಯ ಶಿಕ್ಷಕಿ ಗಂಗಮ್ಮ ಸ್ವಾಗತಿಸಿದರು. ನಿತೀಶ್ ಕುಮಾರ್ ಶ್ಲೋಕ, ಮುರಳಿ ಅಮೃತವಚನ ವಾಚಿಸಿದರು, ಶೃಜೇಶ್ಕುಮಾರ್ ವಂದಿಸಿದರು. ಶ್ರೇಯಾ ಕಾರ್ಯಕ್ರಮ ನಿರೂಪಿಸಿದರು.