Wednesday, October 25, 2023

ನಾಗಮಂಡಲೋತ್ಸವ: ಕಾರ್ಯಾಲಯದ ಉದ್ಘಾಟನೆ‌

Must read

ಬಂಟ್ವಾಳ: ತಾಲೂಕಿನ ಪುದು ಗ್ರಾಮದ ನಾಣ್ಯ ಶ್ರೀ ನಾಗ ರಕ್ತೇಶ್ವರಿ ಕ್ಷೇತ್ರದಲ್ಲಿ ಮುಂದಿನ ಜನವರಿಯಲ್ಲಿ ನಡೆಯಲಿರುವ ಅಷ್ಟ ಪವಿತ್ರ ನಾಗಮಂಡಲೋತ್ಸವ ಪ್ರಯುಕ್ತ ರಾ.ಹೆ.75 ರ ಕಡೆಗೋಳಿಯಲ್ಲಿ ಕಾರ್ಯಾಲಯವನ್ನು ತೆರೆಯಲಾಯಿತು.  ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ರಾದ ಜಗನ್ನಾಥ್ ಚೌಟರವರು ನೆರವೇರಿಸಿ,  ನಾಗಮಂಡಲೋತ್ಸವಕ್ಕೆ  ಈಗಾಗಲೇ ದಿನ ನಿಗದಿ ಯಾಗಿದ್ದು ಸಂಚಲನ ಸಮಿತಿ ರಚನೆಯಾಗಿದೆ . ಸಾರ್ವಜನಿಕರಿಗೆ ಅನುಕೂಲ ವಾಗುವಂತೆ  ಕಾರ್ಯಾಲಯವನ್ನು ತೆರೆಯಲಾಗಿದ್ದು , ನಾಗಮಂಡಲದ ಯಶಸ್ಸಿಗೆ ಸಹಕರಿಸುವಂತೆ  ಮನವಿ ಮಾಡಿದರು.   ಈ ಸಂದರ್ಭದಲ್ಲಿ   ಸ್ಥಳೀಯ  ಗಣ್ಯರಾದ ದೇವಸ್ಯ ಪ್ರಕಾಶ್ಚಂದ್ರ ರೈ , ಸದಾನಂದ ಆಳ್ವ ಕಂಪ , ಭಾಸ್ಕರ ಚೌಟ ಕುಂಭ್ಡೇಲು , ಚಂದ್ರಶೇಖರ ಗಾಂಭೀರ ಸುಜೀರ್ ಗುತ್ತು , ಐತಪ್ಪ ಆಳ್ವ ಸುಜೀರ್ ಗುತ್ತು , ಪೂವಪ್ಪ ಕುಲಾಲ್ ನಾಣ್ಯ , ಚಂದ್ರಹಾಸ್ ಶೆಟ್ಟಿ ರಂಗೋಲಿ , ಕೊಡಮಣ್ಣು ಕಾಂತಪ್ಪ ಶೆಟ್ಟಿ , ವಿಠ್ಠಲ್ ಸಾಲ್ಯಾನ್ ಕುಂಭ್ಡೇಲು, ಪ್ರಕಾಶ್ ಕಿದೆ ಬೆಟ್ಟು , ಗಂಗಾಧರ ಕೋಟ್ಯಾನ್ , ರಾಮಚಂದ್ರ ಮಾರಿಪಳ್ಳ , ನಾಗಪ್ಪ ಶೆಟ್ಟಿ  ಮೇರಮಜಲು. ತಾರಾನಾಥ್ ಕೊಟ್ಟಾರಿ , ಮನೋಜ್ ಆಚಾರ್ಯ   ಕಟ್ಟಡದ ಮಾಲಕ  ಮೋಹನ್  ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.

More articles

Latest article