Sunday, April 7, 2024

ಪರಸ್ಪರ ವೈಯಕ್ತಿಕ ದ್ವೇಷ- ಆರೋಪಕ್ಕೆ ಸಾಕ್ಷಿಯಾದ ಗ್ರಾಮಸಭೆ

ಮಾಣಿ: ಮಾಣಿ ಗ್ರಾ.ಪಂ.ನ 2019-20ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯು ಮಾಣಿಯ ಪಂಚಾಯತ್ ” ಮಾಣಿಕ್ಯ ” ಸಭಾ ಭವನದಲ್ಲಿ ಜುಲೈ 8 ರಂದು ಜರುಗಿತು. ಗ್ರಾ ಪಂ.ಅದ್ಯಕ್ಷೆ ಮಮತಾ ಎಸ್. ಶೆಟ್ಟಿ ಶಂಭುಗ ಅದ್ಯಕ್ಷ ತೆ ವಹಿಸಿದ್ದರು.

ಗ್ರಾಮ ಸಭೆಯ ಪ್ರಮುಖ ಗಮನ ಸೆಳೆದ ಚರ್ಚೆಗಳ ಮುಖ್ಯಾಂಶಗಳು:

1) ಎಲ್ಲರಿಗೂ ಅಗತ್ಯ ಆದಾರ್ ಕಾರ್ಡ್ ನೊಂದಣಿ/ತಿದ್ದುಪಡಿ ಮಾಣಿ ಪಂಚಾಯತ್ ನಲ್ಲಿ ಆಗುವುದಿಲ್ಲ .ಇನ್ನು ಮುಂದೆ ಮಾಣಿ ಪಂಚಾಯತ್ ನಲ್ಲೇ ಆದಾರ್ ತಿದ್ದುಪಡಿ /ಹೊಸದಾದ ನೋಂದಣಿ ಗೆ ವ್ಯವಸ್ಥೆ ಆಗಬೇಕೆಂದು ಸಾರ್ವಜನಿಕರು ಆಗ್ರಹಿಸಿದರು.

2) ಇತ್ತೀಜಿನ ಕೆಲವು ವರ್ಷಗಳಲ್ಲಿ ಸ್ತಳೀಯ ರಾಷ್ಟ್ರೀಕೃತ ಬ್ಯಾಂಕ್ ನ ಮ್ಯಾನೆಜರ್ ಗ್ರಾಮಸಭೆಗೆ ಬರುತ್ತಿಲ್ಲ ಯಾಕೆ ? ಎಂದು ಗ್ರಾಮಸ್ತರು ಪ್ರಶ್ನಿಸಿದರು.ಮಾತ್ರವಲ್ಲದೇ ಪ್ರಸ್ತುತ ಈಗಿನ ಮ್ಯಾನೆಜರ್ ಸಾಲ ವಸೂಲಿ ಮಾತ್ರ ಮಾಡುವುದು.ಗ್ರಾಹಕರಿಗೆ ಸಾಲ ಕೊಡುವುದಿಲ್ಲ ಎಂದು ಸಾರ್ವಜನಿಕರು ಆರೋಪಿಸಿದರು.

3) ಮಾಣಿ – ದಡಿಕೆಮಾರ್ ಪಂಚಾಯತ್ ರಸ್ತೆ ಯ ತೊಂದರೆ ಕುರಿತು ಆ ಪರಿಸರದ ಸ್ತಳೀಯರು ಅಳಲನ್ನು ತೋಡಿಕೊಂಡರು.ಮಾತ್ರವಲ್ಲದೆ ಶೀಘ್ರವಾಗಿ ಸಾರ್ವಜನಿಕರಿಗೆ ಉಪಯೋಗಿಸುವ ಹಾಗೆ ವ್ಯವಸ್ಥೆ ಗೊಳಿಸಬೇಕೆಂದು ಆಗ್ರಹಿಸಿದರು.ಆಗ ಜಿ.ಪಂ. ಸದಸ್ಯರು ಮತ್ತು ಪಂಚಾಯತ್ ಸದಸ್ಯರ ನಡುವೆ ಬಿರುಸಿನ ಚರ್ಚೆ ನಡೆದು ಅದರ ಕಾಮಗಾರಿ ಟೆಂಡರ್ ಹಂತದಲ್ಲಿ ಪ್ರಗತಿ ಪರಿಶೀಲನೆ ಯಲ್ಲಿದೆ ಎಂಬ ಮಾಹಿತಿ ಸಾರ್ವಜನಿಕರಿಗೆ ತಿಳಿದು ಬಂತು. ಆ ರಸ್ತೆ ಯ ಬಗ್ಗೆ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಸ್ತಳೀಯರು ಪಕ್ಷಾತೀತವಾಗಿ ಬೇಸರಿಸಿಕೊಂಡ ಹಾಗೆ ಕಂಡು ಬಂತು.

 

4) ಮಾಣಿ ಗ್ರಾ.ಪಂ ವ್ಯಾಪ್ತಿಯಲ್ಲಿ ಬಡವರಿಗೆ ಮನೆ ಹಂಚಿಕೆ ಆಗಿಲ್ಲದ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು. ಮಾತ್ರ ಅಲ್ಲದೇ ಮಾಣಿ ಗ್ರಾಮದಲ್ಲಿ ಕೆಲವು ಕಡೆ ಸರಕಾರಿ ಭೂಮಿ ಒತ್ತುವರಿ ಆಗುತ್ತಿದೆ ಎಂಬ ಆರೋಪ ಸಭೆಯಲ್ಲಿ ಕೇಳಿಬಂತು. ಆದಷ್ಟು ಬೇಗ ಬಡವರಿಗೆ ಮನೆಕಟ್ಟಲು ಜಾಗ ಮಂಜೂರು ಮಾಡುವಂತೆ ಮಾತ್ರವಲ್ಲದೆ ಮಾಣಿ ಮೆಸ್ಕಾಂ ಗೆ ಸ್ವಂತ ಕಟ್ಟಡವನ್ನು ನಿರ್ಮಿಸಲು ಜಾಗವನ್ನು ಗುರುತಿಸುವಂತೆ ಕೆಲವು ಸಾರ್ವಜನಿಕರು ಆಗ್ರಹಿಸಿದರು.

5) ಮಾಣಿ ಜಂಕ್ಷನ್ ನಲ್ಲಿ ಹೆಚ್ಚು ಕಸ ಕಂಡುಬರುತ್ತಿದ್ದು ಸ್ವಚ್ಚತೆ ಯ ಬಗ್ಗೆ ಸಾರ್ವಜನಿಕರು ಸಹಕಾರ ನೀಡಬೇಕೆಂದು ತಾ .ಪಂ .ಸದಸ್ಯೆ ಮಂಜುಳಾ ಕುಶಲ ಪೆರಾಜೆ ಸಭೆಯಲ್ಲಿ ಹೇಳಿದರು .   ಆಗ ಮಾಣಿಯ ತರಕಾರಿ ವ್ಯಾಪಾರಿ ಉಮ್ಮರ್ ರವರು ಕಸ ವಿಲೇವಾರಿ ಗೆ ಸಂತೆ ಮಾರುಕಟ್ಟೆ ಪರಿಸರದಲ್ಲಿ ಸೂಕ್ತ ವ್ಯವಸ್ಥೆ ಇಲ್ಲ. ಸೂಕ್ತ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದರು. ಆಗ ಕೆಲ ಪಂಚಾಯತ್ ಸದಸ್ಯರು ಮತ್ತು ಸಾರ್ವಜನಿಕ ರ ನಡುವೆ ಬಿರುಸಿನ ಚರ್ಚೆ ನಡೆಯಿತು.

6) ಮಾಣಿ ಪಂಚಾಯತ್ ವ್ಯಾಪ್ತಿಯಲ್ಲಿ ಕೆಲವು ಅನಧಿಕೃತ ವ್ಯಾಪಾರಕ್ಕೆ ಲೈಸೆನ್ಸ್ ನೀಡಲಾಗಿದೆ ಎಂದು ಕೆಲವು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಆಗ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸಂತೆ ಮಾರುಕಟ್ಟೆಪರಿಸರದಲ್ಲಿ ತಾತ್ಕಾಲಿಕ ಲೈಸೆನ್ಸ್ ಮಾತ್ರ ನೀಡಲಾಗಿದೆ ಎಂದು ಹೇಳಿದರು. ಆಗ ಸಾರ್ವಜನಿಕರ ನಡುವೆ ಒಂದು ನಿಮಿಷ ಬಿಸಿ – ಬಿಸಿ ಚರ್ಚೆ ನಡೆಯಿತು .ಕೈ – ಕೈ ಮಿಲಾಯಿಸುವ ಹಂತ ಬಂದಾದ ಸಭೆಯಲ್ಲಿ ಇದ್ದ ಪಂಚಾಯತ್ ಸದಸ್ಯರು ಮತ್ತು ಸಭಾದ್ಯಕ್ಷರು ಸಮಾದಾನ ಮಾಡಿ ಸಭೆ ಸುಗಮ ಆಗುವಂತೆ ಮಾಡಿದರು.

ಆರೋಗ್ಯ, ಕಂದಾಯ,ಪಶುಸಂಗೋಪನೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮೆಸ್ಕಾಂ,ತೋಟಗಾರಿಕೆ ,ಕೃಷಿ ಹೀಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಮಾಹಿತಿ ನೀಡಿದರು. ತಾಲೂಕು ಹಿಂದುಳಿದ ವರ್ಗಗಳ ಶಿಕ್ಷಣ ಅಧಿಕಾರಿಗಳಾದ ಶಿವಣ್ಣ ಗ್ರಾಮಸಭೆಯ ನೋಡಲ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಜಿಲ್ಲಾ ಪಂಚಾಯತ್ ಸದಸ್ಯೆ ಮಂಜುಳಾ ಮಾವೆ, ತಾಲೂಕು ಪಂಚಾಯತ್ ಸದಸ್ಯೆ ಮಂಜುಳಾ ಕುಶಲ ಪೆರಾಜೆ,
ಮಾಣಿ ಗ್ರಾ.ಪಂ. ಅಭಿವೃದ್ಧಿ ಅದಿಕಾರಿ ನಾರಾಯಣ ಗಟ್ಟಿ, ಪಂಚಾಯತ್ ಉಪಾಧ್ಯಕ್ಷೆ  ಸಂಪಾವತಿ,ಸದಸ್ಯರು, ಸಿಬ್ಬಂದಿಗಳು
ಉಪಸ್ಥಿತರಿದ್ದರು.

 

More from the blog

ಬಂಟ್ವಾಳ: ನಿಯಮ ಮೀರಿ ಚಾಲನೆ ಮಾಡಿ ಪೋಲೀಸರ ಕೈಗೆ ಸಿಕ್ಕಿಬಿದ್ದರೆ ದಂಡ ಗ್ಯಾರಂಟಿ….

ಬಂಟ್ವಾಳ: ರಸ್ತೆಯಲ್ಲಿ ಟ್ರಾಫಿಕ್ ಪೋಲೀಸರು ದಂಡ ವಸೂಲಿ ಮಾಡುವ ವೇಳೆ ಸುಳ್ಳು ಹೇಳಿಬಚಾವಾಗಲು ಸಾಧ್ಯವಿಲ್ಲ, ಜೊತೆಗೆ ಅಸಭ್ಯ ವರ್ತನೆ ಮಾಡಿದರೆ ಜೋಕೆ, ಅವರ ಶರೀರದಲ್ಲಿ ಕಣ್ಗಾವಲು ಕ್ಯಾಮರಾ ಅಳವಡಿಸಿಲಾಗಿದ್ದು, ಸೂಕ್ಷ್ಮವಾಗಿ ಎಲ್ಲವನ್ನು ಸೆರೆ...

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ : ಚೆಂಡಿನ ಗದ್ದೆಯಲ್ಲಿ ಪ್ರಥಮ ಚೆಂಡು

ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ದೇವಳದ ಚೆಂಡಿನ ಗದ್ದೆಯಲ್ಲಿ ಇಂದು ಪ್ರಥಮ ಚೆಂಡು ನಡೆಯಿತು. ‌ ಇವತ್ತಿನಿಂದ ಮುಂದಿನ ಐದು ದಿನಗಳ ಕಾಲ ಇಲ್ಲಿ ಚೆಂಡು...

ಏಪ್ರಿಲ್ 7ರಂದು ಕರ್ನಾಟಕ ಜಾನಪದ ಪರಿಷತ್ತು ದ.ಕ.ಜಿಲ್ಲಾ ಬಂಟ್ವಾಳ ತಾಲೂಕು ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ

ಬಂಟ್ವಾಳ: ಏಪ್ರಿಲ್ 7ರಂದು ಅಪರಾಹ್ನ 3 ಗಂಟೆಗೆ ಬಿ.ಸಿ.ರೋಡು ರಂಗೋಲಿ ಸಭಾಂಗಣದಲ್ಲಿ ಕರ್ನಾಟಕ ಜಾನಪದ ಪರಿಷತ್ತು ದ.ಕ.ಜಿಲ್ಲಾ ಬಂಟ್ವಾಳ ತಾಲೂಕು ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ ನಡೆಯಲಿದೆ ಎಂದು ತಾಲೂಕು ಘಟಕದ...

ದ್ವಿಚಕ್ರ ವಾಹನಕ್ಕೆ ರಿಕ್ಷಾ ಡಿಕ್ಕಿ : ಸಹಸವಾರ ಸ್ಥಳದಲ್ಲೇ ಮೃತ್ಯು

ಬಂಟ್ವಾಳ: ರಿಕ್ಷಾ ಡಿಕ್ಕಿಯಾಗಿ ದ್ವಿಚಕ್ರ ವಾಹನದಲ್ಲಿ ಸಂಚಾರ ಮಾಡುತ್ತಿದ್ದ ಸಹಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನರಿಕೊಂಬು ಎಂಬಲ್ಲಿ ನಡೆದಿದೆ. ನರಿಕೊಂಬು ನಿವಾಸಿ ನೀಲಪ್ಪ ಪೂಜಾರಿ ಅವರ ಮಗ ಪವನ್ ( 17) ಮೃತಪಟ್ಟ ಬಾಲಕ. ಮನೆಯಿಂದ...