


ಕೊಳಕೆ: ಸಜೀಪ ಮೂಡ ಗ್ರಾಮದ ಕೊಳಕೆ ನಿವಾಸಿ ದಿವಾಕರ ಎಂಬವರ ತಾಯಿ ಇಂದು ಬೆಳಿಗ್ಗೆ ಬಾವಿಗೆ ಬಿದ್ದಾಗ ಮನೆಯಲ್ಲಿ ಗಂಡಸರು ಯಾರು ಇರಲಿಲ್ಲ , ದಿವಾಕರ ಅವರ ಮನೆಯಲ್ಲಿ ಬೊಬ್ಬೆ ಕೇಳಿದಾಗ ಅಲ್ಲಿಯೇ ಸಮೀಪ ಅಂಗಡಿಯಲ್ಲಿ ಸಿದ್ದೀಕ್ ಕೊಳಕೆ ಅವರು ಮನೆಯತ್ತ ದಾವಿಸಿದಾಗ, ಆಕಸ್ಮಿಕವಾಗಿ ಮಹಿಳೆ ಬಾವಿಗೆ ಬಿದ್ದದ್ದು ಗಮನಕ್ಕೆ ಬಂತು, ಮುಂದೆ ಆಲೋಚನೆ ಮಾಡದೆ ಸಿದ್ದೀಕ್ ಅವರು ಬಾವಿಗೆ ಜಿಗಿದು ತಾಯಿಯನ್ನು ಮೇಲೆತ್ತಿ ತುಂಬೆ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾನೆ, ಮಹಿಳೆ ಅಪಾಯದಿಂದ ಪಾರಾಗಿದ್ದಾರೆ, ಸಿದ್ದೀಕ್ ಅವರ ಸಮಯ ಪ್ರಜ್ಞೆ ಮತ್ತು ತನ್ನ ಜೀವದ ಹಂಗನ್ನು ತೊರೆದು ತಾಯಿಯನ್ನು ಕಾಪಾಡಿದಕ್ಕೆ ವ್ಯಾಪಕ ಪ್ರಸಂಸೆ ವ್ಯಕ್ತವಾಗುತ್ತಿದೆ, ಇನ್ನೂ ಸಿದ್ದೀಕ್ ಮತ್ತು ದಿವಾಕರ ಅವರು ಸ್ನೇಹಿತರು, ಮಾನವ ಸಂಬಂಧ ಎಲ್ಲಾದಕ್ಕಿಂತ ದೊಡ್ಡದು.
ಈದೀಗ ಅವರ ಕಾರ್ಯಚರಣೆಗೆ ಬಾರಿ ಅಭಿನಂದನ ಕರೆಗಳು ಬರುತ್ತಾ ಇದೆ, ಶೋಭಿತ್ ಪೂಂಜಾ ಅವರು ಕೂಡ ಕರೆ ಮಾಡಿ ತಮ್ಮ ಮಾನವೀಯತೆ ಯುವ ಸಮೂಹಕ್ಕೆ ಸ್ಪೂರ್ತಿ ಆಗಲೀ ಅಂಥ ಅಭಿನಂದಿಸಿದ್ದಾರೆ.


