ಬಂಟ್ವಾಳ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯೊಳಗೆ ನುಗ್ಗಿ ನಗನಗದು ಕಳವು ಮಾಡಿದ ಘಟನೆ ಮಾಣಿ ಸಮೀಪದ ಗಡಿಯಾರ ಎಂಬಲ್ಲಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 75 ರ ಗಡಿಯಾರ ಸಮೀಪದ ಜೋಗಿಬೆಟ್ಟು ಎಂಬಲ್ಲಿ ಮಹಮ್ಮದ್ ರಫೀಕ್ ಎಂಬವರ ಮನೆಗೆ ನುಗ್ಗಿ ಕಳ್ಳತನ ನಡೆದಿದೆ.
ಹಂಝ ಎಂಬವರ ಬಾಡಿಗೆ ಮನೆಯಲ್ಲಿ ರುವ ಮಹಮ್ಮದ್ ರಫೀಕ್ ಅವರ ಮನೆಯಿಂದ ನಗ ನಗದು ಕಳವು ಮಾಡಲಾಗಿದೆ.
ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಮನೆಯ ಹಂಚು ತೆಗೆದು ಮನೆಯೊಳಗೇ ನುಗ್ಗಿ ಗೊಡ್ರೇಜಿನಲ್ಲಿದ್ದ 35 ಪವನ್ ಚಿನ್ನ
1ಲಕ್ಷ ನಗದು ಕಳವು ಮಾಡಲಾಗಿದೆ.
ರಫೀಕ್ ಅವರು ಉಪ್ಪಿನಂಗಡಿಯ ಶಾಂತಿನಗರ ಎಂಬಲ್ಲಿ ರುವ ಸಂಬಂಧಿಕರ ಮನೆಗೆ ತೆರಳಿದ ವೇಳೆಯಲ್ಲಿ ಈ ಘಟನೆ ನಡೆದಿದೆ.
ರಾತ್ರಿ 9 ವರೆಗೆ ಮನೆಯಲ್ಲಿದ್ದರು ಬಳಿಕ ಅವರು ಸಂಬಂಧಿಕರ ಮನೆಗೆ ತೆರಳಿದ್ದರು, ಇಂದು ಬೆಳಿಗ್ಗೆ ವಾಪಾಸು ಮನೆಯ ಬರುವ ವೇಳೆ ಈ ಘಟನೆ ಬೆಳಕಿಗೆ ಬಂದಿದೆ.
ವಿಟ್ಲ ಠಾಣಾ ಎಸ್. ಐ.ಯಲ್ಲಪ್ಪ ಹಾಗೂ ಸಿಬ್ಬಂದಿ ಗಳು ಸ್ಥಳಕ್ಕೆ ಬೇಟಿ ನೀಡಿದ್ದಾರೆ. ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಅಗಮಿಸಿದ್ದಾರೆ.