ಬಂಟ್ವಾಳ: ಸಂಘಟನೆಯಲ್ಲಿ ಸಕ್ರಿಯವಾಗಿ ತನ್ನನ್ನು ತಾನು ತೊಡಗಿಸಿಕೊಂಡು ಎಲ್ಲಾ ಸದಸ್ಯರು ಜತೆಯಾಗಿ ಸಮಾಜಮುಖಿ ಕೆಲಸ ಮಾಡಿದಾಗ ಸಂಘಟನೆಯು ಅಭಿವೃದ್ಧಿಗೊಳ್ಳುತ್ತದೆ ಅಲ್ಲದೇ ಸಮಾಜವು ನಮ್ಮನ್ನು ಗುರುತಿಸಿಕೊಳ್ಳುತ್ತದೆ ಎಂದು ಸೌತ್ ಕೆನರಾ ಫೋಟೊಗ್ರಾಪರ್ಸ ಅಸೋಸಿಯೇಷನ್ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾಧ್ಯಕ್ಷರಾದ ವಿಲ್ಸನ್ ಜಾರ್ಜ್ ಗೊನ್ಸಾಲ್ವಿಸ್ ಹೇಳಿದರು. ಅವರು ಜು 23 ರಂದು ಸೌತ್ ಕೆನರಾ ಫೋಟೊಗ್ರಾಪರ್ಸ ಅಸೋಸಿಯೇಷನ್ ಬೆಳ್ತಂಗಡಿ ವಲಯದ 17 ನೇ ವರ್ಷದ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು. ವಲಯದ ಅಧ್ಯಕ್ಷ ಕಿರಣ್ ಕುಮಾರ್ ಅಳದಂಗಡಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಗೌರವಾಧ್ಯಕ್ಷ ಸುಂದರ್ ಕೆ ಬೆಳ್ತಂಗಡಿ, ಪ್ರಧಾನ ಕಾರ್ಯದರ್ಶಿ ರವಿ ಪೂಜಾರಿ ನಾರಾವಿ, ಕೋಶಾಧಿಕಾರಿ ಮಹಾವೀರ ಜೈನ್, ಎಸ್ ಕೆ ಪಿ ಎ ಜಿಲ್ಲಾ ಸಂಚಾಲಕ ವಿಠಲ ಚೌಟ, ಪ್ರಧಾನ ಕಾರ್ಯದರ್ಶಿ ದಯಾನಂದ ಬಂಟ್ವಾಳ, ಪತ್ರಿಕಾ ಪ್ರತಿನಿಧಿ ಸುರೇಶ್ ಬಿ ಕೌಡಂಗೆ, ಉಪಸ್ಥಿತರಿದ್ದರು ಸಭೆಯಲ್ಲಿ ನೂತನ ಪಧಾದಿಕಾರಿಗಳ ಆಯ್ಕೆ ಮಾಡಲಾಯಿತು. ಜಿಲ್ಲಾ ಪಧಾದಿಕಾರಿಗಳಾದ ಕೋಶಾಧಿಕಾರಿ ಶ್ರೀಧರ್ ಶೆಟ್ಟಿಗಾರ್, ಪಿ ಆರ್ ಒ ದೇವರಾಜ್ ಶೆಟ್ಟಿ ಸುರತ್ಕಲ್, ಜತೆ ಕಾರ್ಯದರ್ಶಿ ಹರೀಶ್ ಅಡ್ಯಾರ್, ಕ್ರೀಡಾ ಕಾರ್ಯದರ್ಶಿ ತನುಂಜಯ ರಾವ್ ಉಳ್ಳಾಲ, ಪ್ರವೀಣ್ ಕೊರೆಯ ಉಡುಪಿ, ಉಪಾಧ್ಯಕ್ಷ ಪ್ರಮೋದ್ ಸುವರ್ಣ ಕಾಪು, ಸಂಘಟನಾ ಕಾರ್ಯದರ್ಶಿ ಲೋಕೇಶ್ ಸುಬ್ರಹ್ಮಣ್ಯ, ಜಿಲ್ಲಾ ಸಲಹಾ ಸಮಿತಿ ಸದಸ್ಯರು ಜಯಕರ ಸುವರ್ಣ ಉಡುಪಿ, ಶಿವು ಅಮೀನ್ ಉಡುಪಿ, ರತನ್ ಉಡುಪಿ ಆಗಮಿಸಿದ್ದರು. ಗಣೇಶ್ ಹೆಗ್ಡೆ ನಾರಾವಿ ಪ್ರಾರ್ಥನೆ ಗೈದರು. ಅಧ್ಯಕ್ಷ ಕಿರಣ್ ಕುಮಾರ್ ಅಳದಂಗಡಿ ಸ್ವಾಗತಿಸಿ ವಲಯದ ಪತ್ರಿಕಾ ಪ್ರತಿನಿಧಿ ಮನು ಮದ್ದಡ್ಕ ಕಾರ್ಯಕ್ರಮ ನಿರೂಪಿಸಿದರು ಪ್ರಧಾನ ಕಾರ್ಯದರ್ಶಿ ರವಿ ಪೂಜಾರಿ ನಾರಾವಿ ವಂದಸಿದರು.