Monday, September 25, 2023
More

    ಬಂಟ್ವಾಳ ಕ್ಷೇತ್ರಕ್ಕೆ 100 ಕೋ.ರೂ.ಅನುದಾನ: ಶಾಸಕ ರಾಜೇಶ್ ನಾಯ್ಕ್

    Must read

    ಬಂಟ್ವಾಳ : ಕಳೆದ ಒಂದು ವರ್ಷದ ಅವಧಿಯಲ್ಲಿ ಬಂಟ್ವಾಳ ಕ್ಷೇತ್ರಕ್ಕೆ 100 ಕೋಟಿಗೂ ಮಿಕ್ಕಿ ಅನುದಾನ ವಿವಿಧ ಯೋಜನೆಯಡಿ ಬಂದಿದ್ದು, ಪ್ರತಿ ಗ್ರಾಮಕ್ಕೂ ಆದ್ಯತೆಯ ಮೇಲೆ ಅಭಿವೃದ್ದಿ ಕಾರ್ಯಗಳಿಗೆ  ಹಂಚಿಕೆಮಾಡಲಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದ್ದಾರೆ.

    ಬಂಟ್ವಾಳ ತಾಲೂಕಿನ ಶಂಭೂರಿನಲ್ಲಿ ಅವರು ಡಾ.ಶ್ಯಾಮ್ ಪ್ರಸಾದ್ ಮುಖರ್ಜಿಯವರ ಬಲಿದಾನ ಸಂಸ್ಮ್ಕರಣೆ ಮತ್ತು ಶಂಭೂರು ಗ್ರಾಮದ ಬಿಜೆಪಿ ಕಾರ್ಯಕರ್ತರೊಂದಿಗೆ ಸಮಾಲೋಚನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.

     ಶಂಭೂರು ಗ್ರಾಮಕ್ಕೆ ಸುಮಾರು 1.55 ಕೋಟಿ ರೂ. ಅನುದಾನವನ್ನು ನೀಡಿದ್ದು ಮುಂದಿನ ಅವಧಿಯಲ್ಲಿ ಇನ್ನಷ್ಟು ಅನುದಾನವನ್ನು ನೀಡುವ ಭರವಸೆಯನ್ನು ಶಾಸಕರು ನೀಡಿದರು.

    ಬಂಟ್ವಾಳ  ಕ್ಷೇತ್ರ ಬಿಜೆಪಿ ಸಮಿತಿ  ಅಧ್ಯಕ್ಷ ದೇವದಾಸ ಶೆಟ್ಟಿ, ಪ್ರ.ಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ಉಪಾಧ್ಯಕ್ಷ    ದೇವಪ್ಪ ಪೂಜಾರಿ, ತಾ.ಪಂ. ಮಾಜಿ ಉಪಾಧ್ಯಕ್ಷ  ಆನಂದ ಎ. ಶಂಭೂರು,  ಕಾರ್ಯದರ್ಶಿ  ರಮನಾಥ ರಾಯಿ,  ಸ್ಥಳೀಯ   ಪಂಚಾಯತ್ ಸದಸ್ಯರು, ಕಾರ್ಯಕರ್ತರು ಈ ಸಂದರ್ಭ  ಉಪಸ್ಥಿತರಿದ್ದರು.

    More articles

    LEAVE A REPLY

    Please enter your comment!
    Please enter your name here

    Latest article